Advertisement

ಹೊಸ ಇತಿಹಾಸ ಬರೆಯಲಿರುವ ಯೋಜನೆ

12:40 AM Jul 09, 2019 | Team Udayavani |

ಈ ಬಾರಿಯ ಚಂದ್ರಯಾನ-2 ಯಶಸ್ವಿಯಾದರೆ, ಜಗತ್ತಿನಲ್ಲೇ ಮೊತ್ತಮೊದಲ ಬಾರಿಗೆ ಚಂದ್ರನ ದಕ್ಷಿಣ ಧ್ರುವವನ್ನು ಅನ್ವೇಷಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಭಾಜನವಾಗಲಿದೆ. ಅಂಥ ಮಹತ್ಕಾರ್ಯ ಸಾಧಿಸಿದ ಹೆಗ್ಗಳಿಕೆ ಇಸ್ರೋ ಪಾಲಾಗಲಿದೆ.

Advertisement

ಚಂದ್ರನ ಅಧ್ಯಯನಕ್ಕೆ ಮನುಷ್ಯ ತೊಡಗಿಕೊಂಡು ದಶಕಗಳೇ ಉರುಳಿರುವಾಗ ಚಂದ್ರನ ದಕ್ಷಿಣ ಧ್ರುವವನ್ನು ಅನ್ವೇಷಿಸುವ ಗೋಜಿಗೆ ಯಾಕೆ ಯಾರೂ ಹೋಗಿರಲಿಲ್ಲ ಎಂಬ ಪ್ರಶ್ನೆ ಮೂಡುವುದು ಸಹಜ. ಅದಕ್ಕೆ ಉತ್ತರ, ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆಯನ್ನು ಇಳಿಸುವುದು ಅತ್ಯಂತ ಕ್ಲಿಷ್ಟಕರ ಸಾಹಸ. ಬರೀ ಪ್ರಪಾತಗಳೇ ತುಂಬಿರುವ ಈ ಭಾಗದಲ್ಲಿ ಇಳಿಯಬೇಕಿರುವ ಗಗನನೌಕೆಯ ಕಾರ್ಯಾಚರಣೆಯಲ್ಲಿ ಕೂದಲೆಳೆಯಷ್ಟು ವ್ಯತ್ಯಾಸವಾದರೂ ಇಡೀ ಯೋಜನೆಯೇ ಸ್ತಬ್ಧವಾಗುತ್ತದೆ. ಹಾಗಾಗಿಯೇ, ಅಂಥ ರಿಸ್ಕ್ ತೆಗೆದುಕೊ ಳ್ಳಲು ಯಾರೂ ಈವರೆಗೆ ಮುಂದಾಗಿಲ್ಲ. ಆದರೆ, ಅದನ್ನೇ ಸವಾಲಾಗಿ ಸ್ವೀಕರಿಸಿರುವ ಇಸ್ರೋ ಆ ನಿಟ್ಟಿನಲ್ಲಿ ಹೆಜ್ಜೆ ಹಾಕಿದ್ದು, ಆ ಸಂಸ್ಥೆ ಹೊಸ ಇತಿಹಾಸ ನಿರ್ಮಿಸಲೆಂದು ಹಾರೈಸೋಣ.

 

Advertisement

Udayavani is now on Telegram. Click here to join our channel and stay updated with the latest news.

Next