Advertisement
ಗೋದಾವರಿ ನದಿಯಿಂದ ಸುಮಾರು ಮೂರು ಸಾವಿರ ಟಿಎಂಸಿ ನೀರು ಸಮುದ್ರದ ಪಾಲಾಗುತ್ತಿದೆ. ಅದನ್ನು ರಕ್ಷಿಸಿ ಉಪಯೋಗಿಸಿಕೊಂಡರೆ ಗುಜರಾತ, ಕರ್ನಾಟಕ, ಆಂಧ್ರ, ತೆಲಂಗಾಣ, ಗೋವಾ ರಾಜ್ಯಗಳಿಗೆ ನೀರಾವರಿಗೆ ಅನುಕೂಲವಾಗಲಿದೆ ಎಂದರಲ್ಲದೇ ಗಂಗಾ-ಕಾವೇರಿ ನದಿ ಜೋಡಿಸಲು ಶ್ರಮಿಸುವುದಾಗಿ ತಿಳಿಸಿದರು.
Related Articles
ಬಸ್ ಆರಂಭಿಸಲಾಗಿದೆ. ವಿಜಯಪುರ ಜಿಲ್ಲೆಯ ಕೆರೆಗಳು ಹಾಗೂ ನದಿಗಳಿಂದ ವಿಜಯಪುರದ ಜನತೆ ದೆಹಲಿಗೆ ಪ್ರಯಾಣ ಬೆಳೆಸುವಂತೆ ಮಾಡುವುದಾಗಿ ಹೇಳಿದರು. ಇದರಿಂದ ಏರ್ಪೋರ್ಟ್ ಅವಶ್ಯಕತೆ ಬೀಳುವುದಿಲ್ಲ. ನೀರಿನಲ್ಲಿ ಇಳಿಯುವ ವಿಮಾನಗಳು ಬರಲಿವೆ. ವಾಟರ್ ಫೋರ್ಟ್ಗಳು ನಿರ್ಮಾಣವಾಗಲಿವೆ. ಇದನ್ನು ನಮ್ಮ ಸರ್ಕಾರ
ಸಾಧಿಸಿ ತೋರಿಸಲಿದೆ ಎಂದರು.
Advertisement
ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ ಮಾತನಾಡಿ, ಗಡ್ಕರಿ ಅವರು ಮುಂಬರುವ ದಿನಗಳಲ್ಲಿ ಕರ್ನಾಟಕಕ್ಕೆ 2 ಲಕ್ಷ ಕೋಟಿ ರೂ. ಮೌಲ್ಯದ ರಸ್ತೆಗಳನ್ನು ನಿರ್ಮಿಸಲಿದ್ದಾರೆ. ಭಾರತದ ಎಲ್ಲ 32 ನದಿಗಳನ್ನು ಜೋಡಿಸಬೇಕೆಂಬುದು ನನ್ನ ಬೇಡಿಕೆಯಾಗಿದೆ. ದೇಶದ 32 ನದಿಗಳನ್ನು ಜೋಡಿಸಿ ಸುಜಲಾಂ ಸುಫಲಾಂ ಮಾಡಬೇಕಿದೆ. ಎಲ್ಲ ನದಿಗಳ ಜೋಡಣೆ ಮೋದಿ ಅವರ ಕನಸಾಗಿದೆ ಎಂದರು.
ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ, ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಸಂಸದ ಪ್ರಹ್ಲಾದ ಜೋಶಿಮಾತನಾಡಿದರು.ಶಾಸಕ ರಮೇಶ ಭೂಸನೂರ, ಎಂಎಲ್ಸಿ ಅರುಣ ಶಹಾಪುರ, ಬಸವನಗೌಡ ಪಾಟೀಲ (ಯತ್ನಾಳ),
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಅಪ್ಪು ಪಟ್ಟಣಶೆಟ್ಟಿ, ಜಿಲ್ಲಾಧ್ಯಕ್ಷ ವಿಠ್ಠಲ ಕಟಕದೋಂಡ, ಚಂದ್ರಶೇಖರ ಕವಟಗಿ, ಬಿಜೆಪಿ ಮಂಡಲ ಅಧ್ಯಕ್ಷ ಕಾಸುಗೌಡ ಬಿರಾದಾರ, ರವಿಕಾಂತ ಬಗಲಿ, ದಯಾಸಾಗರ ಬಿರಾದಾರ, ಶ್ರೀಶೈಲಗೌಡ ಬಿರಾದಾರ, ಪಾಪು ಕಿತ್ತಲಿ, ಶೀಲವಂತ ಉಮರಾಣಿ ಮತ್ತಿತರರಿದ್ದರು.