Advertisement

ರಾಜ್ಯ ಹೆದ್ದಾರಿಯಲ್ಲೇ ಹೊಂಡ

10:48 PM Oct 21, 2019 | Sriram |

ಬಸ್ರೂರು: ಕುಂದಾಪುರ- ತೀರ್ಥಹಳ್ಳಿ ರಾಜ್ಯ ಹೆದ್ದಾರಿ ಹಾದು ಹೋಗುವ ಕೋಣಿ ಎಚ್‌.ಎಂ.ಟಿ. ತಿರುವಿನಲ್ಲಿ ರಸ್ತೆ ಮಧ್ಯೆಯೇ ದೊಡ್ಡ ಹೊಂಡ ಸೃಷ್ಟಿಯಾಗಿದ್ದು, ವಾಹನ ಸವಾರರಿಗೆ ತೊಂದರೆಯಾಗುತ್ತಿದೆ.

Advertisement

ರಸ್ತೆಯ ಅಡಿಯಲ್ಲಿ ನೀರಿನ ಪೈಪ್‌ ಅಳವಡಿಸುವ ಸಂದರ್ಭದಲ್ಲಿ ಅಗೆದು ಹಾಕಿದ್ದರಿಂದ ಈ ಹೊಂಡ ಸೃಷ್ಟಿಯಾಗಿದೆ. ಪೈಪ್‌ ಅಳವಡಿಸಿದ ಅನಂತರ ಅದನ್ನು ಸರಿಯಾಗಿ ಮುಚ್ಚಿ, ಡಾಮರೀಕರಣ ಮಾಡದ ಕಾರಣ ಹೊಂಡ ಮತ್ತಷ್ಟು ದೊಡ್ಡದಾಗಿದೆ. ಹೊಂಡದಲ್ಲಿ ಮಳೆ ನೀರು ತುಂಬಿ ಅನೇಕ ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿದ ನಿದರ್ಶನಗಳೂ ಇವೆ.

ಈ ಬಗ್ಗೆ ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next