Advertisement

ಗುಂಡೇರಿ ತಿರುವಿನಲ್ಲಿ ಹೊಂಡ ಆಯ ತಪ್ಪಿದರೆ ಅಪಾಯ

02:22 AM Jun 30, 2019 | Team Udayavani |

ಬೆಳ್ತಂಗಡಿ: ಕಾರ್ಕಳ ಹೆದ್ದಾರಿಯ ಬಳಂಜ ಗ್ರಾ.ಪಂ. ವ್ಯಾಪ್ತಿಗೊಳಪಟ್ಟ ಗುಂಡೇರಿ ತಿರುವು ಬಳಿ ರಸ್ತೆ ಅಂಚಿನಲ್ಲಿ ಹೊಂಡ ನಿರ್ಮಾಣವಾಗಿ ಅಪಾಯ ಆಹ್ವಾನಿಸುತ್ತಿದೆೆ.

Advertisement

ಸುಮಾರು ಒಂದೂವರೆ ವರ್ಷಗಳ ಹಿಂದೆ ಜಲ್ಲಿ ಹೇರಿ ಬಂದಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿತ್ತು. ಇದೇ ಸ್ಥಳದಲ್ಲಿ ಬೃಹತ್‌ ಗಾತ್ರದ ಕಣಿವೆಯಾಕಾರದಲ್ಲಿ ಸುಮಾರು 3 ಅಡಿ ಆಳದ ಹೊಂಡ ನಿರ್ಮಾಣವಾಗಿದ್ದು, ಹಲವು ಅಪಘಾತ ಸಂಭವಿಸಿದೆ.

ಶಾಲಾ ಮಕ್ಕಳಿಗೆ, ಪಾದಚಾರಿಗಳಿಗೆ ನಡೆದಾಡಲು ಸಾಧ್ಯವಾಗ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.

ರಾಜ್ಯ ಹೆದ್ದಾರಿ ಇಲಾಖೆ, ಎಂಜಿನಿಯರ್‌ಗಳು, ಜನಪ್ರತಿನಿಧಿಗಳು ಗಮನಹರಸಿ ದಂತಿಲ್ಲ. ಅಪಾಯ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳುವಂತೆ ಸ್ಥಳೀಯರು, ವಾಹನ ಸವಾರರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next