Advertisement

ಪಿರಿಯಾಪಟ್ಟಣ : ಉಸಿರುಗಟ್ಟಿಸಿ ಪತ್ನಿಯ ಕೊಲೆ, ಪೊಲೀಸರಿಂದ ಪತಿಯ ಬಂಧನ

11:05 PM May 11, 2022 | Team Udayavani |

ಪಿರಿಯಾಪಟ್ಟಣ: ಮನೆಯಲ್ಲಿ ಮಲಗಿದ್ದ ಪತ್ನಿಯನ್ನು ಪತಿಯೇ ಉಸಿರುಗಟ್ಟಿಸಿ ಕೊಂದ ಘಟನೆ ಎರಡು ದಿನದ ನಂತರ ಬೆಳಿಕೆಗೆ ಬಂದಿದೆ.

Advertisement

ಪಿರಿಯಾಪಟ್ಟಣ ತಾಲೂಕಿನ ಬೂದಿತಿಟ್ಟು ಗ್ರಾಮದ ಸೌಮ್ಯ ಎಂಬಾಕೆಯೆ ಸಾನಪ್ಪಿರುವಾಗಿಕೆ ಈಗೆ 8 ವರ್ಷಗಳ ಹಿಂದೆ ಅಬ್ಬಳತಿ ಗ್ರಾಮದಿಂದ ಬೂದಿತಿಟ್ಟು ಗ್ರಾಮದ ಸ್ವಾಮೀನಾಯಕ ಎಂಬ ಯುವಕನೊಂದಿಗೆ ಮದುವೆಯಾಗಿದ್ದಳು. ಇವರಿಗೆ ಧನ್ಯ 4, ಕುಶಾಲ್‌ 7 ಎಂಬ ಇಬ್ಬರು ಮಕ್ಕಳಿದ್ಧಾರೆ. ಆಗಾಗ್ಗೆ ಸಂಸಾರದಲ್ಲಿ ಗಲಾಟೆಗಳಾಗುತ್ತಿತ್ತು ಎನ್ನಲಾಗಿದೆ.

ಎರಡು ದಿನಗಳಾದರು ಮಗಳು ಮನೆಗೆ ಬಾರದಿರುವುದು ಮತ್ತು ತಮ್ಮೊಂದಿಗೆ ಇದ್ದ ಮೊಮ್ಮಗ ಕುಶಾಲ್‌ ನನ್ನು ಮನೆಗೆ ಸೇರಿಸದಿರುವುದು ಕಂಡು ಮನೆಗೆ ಬಂದು ನೋಡಿದಾಗ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ, ಘಟನೆ ಕುರಿತು ಪೊಲೀಸರಿಗೆ ದೂರು ನೀಡಿದ್ದ ಪೋಷಕರು, ಮಗಳನ್ನು ಅಳಿಯನೇ ಕೊಲೆ ಮಾಡಿದ್ಧಾನೆ ಎಂದು ಸೌಮ್ಯಳ ತಾಯಿ ಮಹದೇವಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ಧಾರೆ.

ಇದನ್ನೂ ಓದಿ : ಸಹಾಯಕ ಎಂಜಿನಿಯರ್‌ ಪರೀಕ್ಷೆ ಅಕ್ರಮ:  ಆರ್‌.ಡಿ.ಪಾಟೀಲ್‌ ಬೆಂಗಳೂರು ಪೊಲೀಸರ ವಶಕ್ಕೆ

ಘಟನೆ ಸೋಮವಾರವೆ ನಡೆದಿದ್ದು ಎರಡು ದಿನಗಳಾದರು ಗ್ರಾಮದವರಿಗೆ ತಿಳಿಯದಂತೆ ಸ್ವಾಮಿ ನಾಯಕ ನೋಡಿಕೊಂಡಿದ್ಧಾನೆ. ನಂತರ ಪೊಲೀಸರು ಮನೆಗೆ ತೆರಳಿ ನೋಡಿದಾಗ ಪತ್ನಿಯ ಶವ ದೊರಕಿದ್ದು ಶವವನ್ನು ಶವಪರೀಕ್ಷೆ ನಡೆಸಲಾಗಿದ್ದು. ಅಲ್ಲದೆ ಫ್ಲೋರೆನ್ಸಿಕ್ ಲ್ಯಾಬ್‌ ತಜ್ಞರು ಸ್ಥಳಕ್ಕೆ ಆಗಮಿಸಿ ಸಾಕ್ಷಿಯನ್ನು ಸಂಗ್ರಹಿಸಿದ್ಧಾರೆ.

Advertisement

ಉಸಿರುಗಟ್ಟಿಸಿ ಕೊಲೆಗೈದಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು ಈತನ ಕೃತ್ಯದಿಂದ ಇಬ್ಬರು ಮಕ್ಕಳು ಅನಾಥರಾಗಿದ್ಧಾರೆ.

ಈ ಸಂಬಂಧ ಪ್ರಕರಣ ದಾಖಸಿಕೊಂಡಿರುವ ಪಿರಿಯಾಪಟ್ಟಣ ಪೊಲೀಸರು ಆರೋಪಿ ಸ್ವಾಮಿನಾಯಕನನ್ನು ವಶಕ್ಕೆ ಪಡೆದು ತನಿಕೆಯನ್ನು ಕೈಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next