Advertisement

ಶಬರಿಮಲೆಯಲ್ಲಿ ಪಿಣರಾಯ್ ಸರ್ಕಾರ ಮೂರು ಕಾಸಿನ ಕೆಲಸ ಮಾಡಿಲ್ಲ- ಆರಗ ಜ್ಞಾನೇಂದ್ರ

05:29 PM Dec 16, 2023 | Team Udayavani |

ತೀರ್ಥಹಳ್ಳಿ : ಶಬರಿಮಲೆಗೆ ಲಕ್ಷಾಂತರ ಭಕ್ತಾದಿಗಳು ಪ್ರತಿ ವರ್ಷ ದೇಶ ವಿದೇಶಗಳಿಂದ ಭೇಟಿ ನೀಡುತ್ತಾರೆ. ಕಳೆದ ವರ್ಷ ನಾನು ಕೂಡ ಹೋಗಿ ದೇವರ ದರ್ಶನ ಮಾಡಿ ಬಂದಿದ್ದೆ. ದೇವಸ್ಥಾನದಿಂದ ಸರ್ಕಾರಕ್ಕೂ ಸಿಕ್ಕಾಪಟ್ಟೆ ಆದಾಯ ಬರುತ್ತದೆ. ಆ ಆದಾಯವನ್ನು ಉಪಯೋಗಿಸಿ ಪಿಣರಾಯ್ ಸರ್ಕಾರ ಮೂರು ಕಾಸಿನ ಕೆಲಸ ಮಾಡಿಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

Advertisement

ಶನಿವಾರ ಪಟ್ಟಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು ಶಬರಿಮಲೆ ದೇವಸ್ಥಾನದ ಭದ್ರತೆ ಬಗ್ಗೆ ಹೆಚ್ಚಿನ ಗಮನವಹಿಸದೆ ದೇವಸ್ಥಾನವನ್ನು ನಗಣ್ಯ ಮಾಡಲು ಎಡಪಂಕ್ತಿಯ ಸರ್ಕಾರ ಹೊರಟಿದೆ. ಇದರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಸರ್ಕಾರ ಸರಿಯಾದ ರೀತಿಯಲ್ಲಿ ಯೋಜನೆಯನ್ನು ರೂಪಿಸಬೇಕು.ಅಲ್ಲಿ ಬರುವ ಪ್ರವಾಸಿಗರಿಗೆ, ಭಕ್ತರಿಗೆ ಸೌಲಭ್ಯವನ್ನು ವಹಿಸಬೇಕು. ರಕ್ಷಣೆ ನೀಡಬೇಕು. ಇವೆಲ್ಲವನ್ನೂ ತಕ್ಷಣವೇ ಮಾಡಬೇಕು. ಇಲ್ಲದಿದ್ದರೆ ಇಡೀ ದೇಶದ ಜನಸಾಮಾನ್ಯರ ಆಕ್ರೋಶಕ್ಕೆ ಪಿಣರಾಯ್ ಸರ್ಕಾರ ಒಳಗಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next