Advertisement

ಕಂಬದಕೋಣೆ: ಸುಂಟರ ಗಾಳಿಗೆ ಮನೆ, ಕೊಟ್ಟಿಗೆಗೆ ಹಾನಿ

11:32 PM Aug 04, 2019 | Sriram |

ಉಪ್ಪುಂದ: ಕಂಬದಕೋಣೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಸುಂಟರಗಾಳಿ ಬೀಸಿದ ಪರಿಣಾಮ ತೆಂಕಬೆಟ್ಟು ಕಡೆಮನೆ ಅಣ್ಣಪ್ಪ ಬಳೆಗಾರ ಎಂಬವರ ಟೆರೇಸ್‌ ಮೇಲೆ ಮರವೊಂದು ಬಿದ್ದ ಪರಿಣಾಮ ಮನೆಗೆ ಹಾನಿ ಉಂಟಾಗಿದೆ.

Advertisement

ರಾತ್ರಿ ಹೊತ್ತು ದಿಢೀರನೆ ಬೀಸಿದ ಸುಂಟರಗಾಳಿಯಿಂದಾಗಿ ಮನೆಯೊಳಗೆ ಲಘು ಕಂಪನ ಕಾಣಿಸಿಕೊಂಡು ಮನೆಯ ಮೇಲೆ ಮರಬಿದ್ದ ಪರಿಣಾಮ ಗೋಡೆ ಬಿರುಕು ಬಿಟ್ಟಿತಲ್ಲದೇ ಮೇಲ್ಛಾವಣಿ ಹಾನಿಗೀಡಾಗಿದೆ.

ಕೊಟ್ಟಿಗೆಯೂ ಹಾನಿ
ಸುಂಟರ ಗಾಳಿಯ ಆರ್ಭಟಕ್ಕೆ ಅವರ ಮನೆಯ ದನದ ಕೊಟ್ಟಿಗೆಯು ಕುಸಿದು ಸಂಪೂರ್ಣ ಹಾನಿಗೀಡಾಗಿದೆ. ಇದು ಆರ್ಥಿಕವಾಗಿ ತೀರಾ ಹಿಂದುಳಿದ ಕುಟುಂಬವಾಗಿದ್ದು ಮನೆ, ಕೊಟ್ಟಿಗೆಗೆ ಹಾನಿಗೀಡಾದ ಹಿನ್ನೆಲೆಯಲ್ಲಿ ಅವರು ಆತಂಕ ಗೊಂಡಿದ್ದು, ಜಿಲ್ಲಾಡಳಿತ ಸಮರ್ಪಕ ಪರಿಹಾರ ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next