Advertisement

ತೋಟದಲ್ಲಿ ಪಿಕಪ್‌ ವಾಹನ ಪಲ್ಟಿ : ಮರಗಳ್ಳರು ಪರಾರಿ

10:02 PM Jun 10, 2023 | Team Udayavani |

ಮಡಿಕೇರಿ: ಕಾಫಿ ತೋಟದಲ್ಲಿದ್ದ ಬೀಟೆ ಮರವನ್ನು ಅಕ್ರಮವಾಗಿ ಕಡಿದು ಅದರ ದಿಮ್ಮಿಗಳನ್ನು ಕದ್ದೊಯ್ಯುತ್ತಿದ್ದ ಸಂದರ್ಭ ವಾಹನ ಪಲ್ಟಿಯಾದ ಹಿನ್ನೆಲೆ ಮರಗ‌ಳ್ಳರು ಸ್ಥಳದಿಂದ ಪರಾರಿಯಾಗಿರುವ ಪ್ರಕರಣ ಪೊನ್ನಂಪೇಟೆ ತಾಲೂಕಿನಲ್ಲಿ ನಡೆದಿದೆ. ಈ ಕುರಿತು ಪೊನ್ನಂಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೀಟೆ ಮರದ 7 ದಿಮ್ಮಿಗಳ ಸಹಿತ ಸಾಗಾಟಕ್ಕೆ ಬಳಸಿದ್ದ ಪಿಕಪ್‌ ವಾಹನವನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ.

Advertisement

ಪೊನ್ನಂಪೇಟೆ ತಾಲೂಕಿನ ನಲ್ಲೂರು ಗ್ರಾಮದ ತೀತರಮಾಡ ಸುನೀಲ್‌ ಅವರ ಕಾಫಿ ತೋಟದಲ್ಲಿ ಬೀಟೆ ಮರಗಳಿದ್ದು, ವಾರದ ಹಿಂದೆ ಮರಗ‌ಳ್ಳರು 1 ಮರವನ್ನು ಕಡಿದು ಹಾಕಿದ್ದರು. ಈ ಕುರಿತು ತೋಟದ ಮಾಲಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.

ವಿಷಯ ತಿಳಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬಂದಿ ಸ್ಥಳಕ್ಕಾಗಮಿಸಿ ಮಹಜರು ನಡೆಸಿ ಸ್ಥಳದಿಂದ ತೆರಳಿದ್ದರು. ಬೀಟೆ ಮರದ ದಿಮ್ಮಿಗಳನ್ನು ತೋಟದಲ್ಲೇ ಬಿಡಲಾಗಿತ್ತು.

ತೋಟದ ಮಾಲಕರು ಬೆಂಗಳೂರಿಗೆ ತೆರಳಿದ್ದ ಮಾಹಿತಿ ಅರಿತ ಚೋರರು ಶುಕ್ರವಾರ ರಾತ್ರಿ ಪಿಕಪ್‌ ವಾಹನದಲ್ಲಿ ದಿಮ್ಮಿಗಳನ್ನು ತುಂಬಿಸಿ ಕದ್ದೊಯ್ಯುವ ಪ್ರಯತ್ನ ಮಾಡಿದ್ದರು. ಈ ಸಂದರ್ಭ ವಾಹನ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಪರಿಣಾಮ ಮರ ಕಳ್ಳರು ವಾಹನ ಸಹಿತ ಬೀಟೆ ಮರದ ದಿಮ್ಮಿಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next