Advertisement

ಚಿತಾಭಸ್ಮ ವೇಳೆ ಜೇಬುಗಳ್ಳತನ

02:53 PM Nov 29, 2018 | Team Udayavani |

ಶ್ರೀರಂಗಪಟ್ಟಣ: ಕಾವೇರಿ ಸಂಗಮದಲ್ಲಿ ತನ್ನ ನೆಚ್ಚಿನ ನಟ ಅಂಬರೀಶ್‌ ಚಿತಾಭಸ್ಮ ವಿಸರ್ಜನೆ ವೀಕ್ಷಣೆಗೆ ಆಗಮಿಸಿದ್ದ ಅಭಿಮಾನಿಯ ಕಿಸೆಯಿಂದ 70 ಸಾವಿರ ರೂ. ಹಣ ಜೇಬುಗಳ್ಳರು ಕದ್ದಿರುವ ಘಟನೆ ನಡೆಯಿತು. ಮೈಸೂರು ಜಿಲ್ಲೆ ಸಿದ್ದರಾಮನಹುಂಡಿ ಗ್ರಾಮದ ವ್ಯಾಪಾರಿ ಮಹೇಂದ್ರ ಹಣ ಕಳೆದುಕೊಂಡು ಕಾವೇರಿ ಸಂಗಮದಲ್ಲಿ ಪೊಲೀಸರೆದುರು ರೋಧಿಸುತ್ತಿದ್ದುದ್ದು ಕಂಡು ಬಂದಿತು. ಮಧ್ಯಾಹ್ನದ ವೇಳೆಗೆ ಆಗಮಿಸಿದ ನಟ ಅಂಬರೀಶ್‌ ಚಿತಾಭಸ್ಮ ವಿಸರ್ಜನೆ ವೇಳೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗವಹಿಸಿದ್ದರು. ಈ ವೇಳೆ ಮಹೇಂದ್ರ ಸಹ ಕಾವೇರಿ ಸಂಗಮದಲ್ಲಿ ನಿಂತು ವೀಕ್ಷಿಸುತ್ತಿದ್ದರು.

Advertisement

ಪೊಲೀಸರು ನದಿ ತಟಕ್ಕೆ ಜನರು ಆಗಮಿಸಿದಂತೆ ಬ್ಯಾರಿಕೇಡ್‌ ಅಳವಡಿಸಿ ತಡೆದು ಭದ್ರತೆ ಒದಗಿಸಿದ್ದರು. ಈ ವೇಳೆ ಅಧಿಕ ಜನರು ಕಿಕ್ಕಿರಿದು ತುಂಬಿದ್ದರು. ಜನರ ತಳ್ಳಾಟದ ನಡುವೆ ತನ್ನ ಪ್ಯಾಂಟ್‌ ಜೇಬಿನಲ್ಲಿದ್ದ 70 ಸಾವಿರ ರೂ. ಗಳನ್ನು ಕಳ್ಳರು ಎಗರಿಸಿದ್ದಾರೆ ಎಂದು ಮಹೇಂದ್ರ ಶ್ರೀರಂಗಪಟ್ಟಣ ಠಾಣೆಗೆ ದೂರು ನೀಡಿದ್ದು, ಪೊಲೀಸರು ಈ ಕುರಿತು ತನಿಖೆ ಕೈಗೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next