Advertisement

ದಸರಾ ಬಳಿಕ ಸುಪ್ರೀಂನಲ್ಲಿ ಭೌತಿಕ ವಿಚಾರಣೆ?

01:39 AM Sep 27, 2021 | Team Udayavani |

ಹೊಸದಿಲ್ಲಿ: ದಸರಾ ರಜೆಯ ಬಳಿಕ ಸುಪ್ರೀಂ ಕೋರ್ಟ್‌ನಲ್ಲಿ ಭೌತಿಕ ವಿಚಾರಣೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿದೆಯೇ?

Advertisement

ದೇಶದ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಈ ಸುಳಿವು ನೀಡಿದ್ದಾರೆ. ಕೊರೊನಾ ಮೂರನೇ ಅಲೆ ಬಾರದೆ ಇದ್ದರೆ ದಸರಾ ರಜೆ ಬಳಿಕ ಸುಪ್ರೀಂನಲ್ಲಿ ಪೂರ್ಣ ಪ್ರಮಾಣದಲ್ಲಿ ಭೌತಿಕ ವಿಚಾರಣೆ ಪುನರಾರಂಭಿಸಬಹುದು ಎಂಬ ವಿಶ್ವಾಸವಿದೆ ಎಂದಿದ್ದಾರೆ.

ಭೌತಿಕ ವಿಚಾರಣೆ ಆರಂಭಕ್ಕೆ ನಮ್ಮ ಅಭ್ಯಂತರವಿಲ್ಲ. ಬಹುತೇಕ ವಕೀಲರು ಇದಕ್ಕೆ ಆಸಕ್ತಿ ತೋರಿದ್ದಾರೆ. ಆದರೆ ತಜ್ಞ ವೈದ್ಯರ ಸೂಚನೆ ಇರುವ ಕಾರಣ ಅಪಾಯ ಮೈಮೇಲೆ ಎಳೆದುಕೊಳ್ಳಲು ಬಯಸುವುದಿಲ್ಲ. ಮೂರನೇ ಅಲೆ ಬಾರದೆ ಇದ್ದರೆ, ದಸರಾ ಬಳಿಕ ಭೌತಿಕ ವಿಚಾರಣೆ ಆರಂಭವಾಗಬಹುದು ಎಂದು ಸಿಜೆಐ ಹೇಳಿದ್ದಾರೆ.

ಇದನ್ನೂ ಓದಿ:ನನ್ನ ರಾಜೀನಾಮೆಗೆ ಮೋದಿಯೂ ಬೆರಗಾಗಿದ್ದರು: ಬಿಎಸ್‌ವೈ

ಶೇ. 50 ಮೀಸಲಾತಿ ಸಿಗಲಿ
ನ್ಯಾಯಾಂಗದಲ್ಲಿ ಮಹಿಳೆಯರಿಗೆ ಶೇ. 50 ಮೀಸಲಾತಿ ಸಿಗಬೇಕು. ದೇಶದ ಕಾನೂನು ಕಾಲೇಜುಗಳಲ್ಲಿಯೂ ಹೆಣ್ಣುಮಕ್ಕಳಿಗೆ ಇದೇ ಮಾದರಿಯ ಮೀಸಲಾತಿಗೆ ಬೆಂಬಲ ನೀಡುವುದಾಗಿಯೂ ಸಿಜೆಐ ಘೋಷಿಸಿದ್ದಾರೆ.

Advertisement

ಇದು ಸಾವಿರಾರು ವರ್ಷಗಳ ಶೋಷಣೆಗೆ ಸಂಬಂಧಿಸಿದ ವಿಚಾರ. ನ್ಯಾಯಾಂಗದ ಕೆಳಹಂತಗಳಲ್ಲಿ ಶೇ. 30ಕ್ಕಿಂತಲೂ ಕಡಿಮೆ ಮಹಿಳಾ ನ್ಯಾಯಮೂರ್ತಿಗಳಿದ್ದಾರೆ. ಹೈಕೋರ್ಟ್‌ಗಳಲ್ಲಿ ಶೇ. 11.5ರಷ್ಟಿದ್ದರೆ, ಸುಪ್ರೀಂನಲ್ಲಿ ಕೇವಲ ಶೇ. 11-12ರಷ್ಟು ಮಹಿಳೆಯರಿದ್ದಾರೆ. ಮೀಸಲಾತಿ ನಿಮ್ಮೆಲ್ಲರ ಹಕ್ಕು ಎಂದು ಸಿಜೆಐ ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next