Advertisement

ಫೋನಿ: ಸಾವಿನ ಸಂಖ್ಯೆ 16ಕ್ಕೆ

03:34 AM May 05, 2019 | sudhir |

ಹೊಸದಿಲ್ಲಿ: ಒಡಿಶಾದ ಪುರಿಗೆ ಅಪ್ಪಳಿಸಿದ್ದ “ಫೋನಿ’ ಚಂಡಮಾರುತ ಶನಿವಾರ ಪಶ್ಚಿಮ ಬಂಗಾಲ ದಾಟಿ ಬಾಂಗ್ಲಾದೇಶ ತಲುಪಿ ಬಳಿಕ ದುರ್ಬಲಗೊಂಡಿದೆ.

Advertisement

ಒಡಿಶಾದ 14 ಜಿಲ್ಲೆಗಳಲ್ಲಿ ಫೋನಿಯ ಆರ್ಭಟ ಜೋರಾಗಿತ್ತು. ಇಲ್ಲಿ ಸಾವಿನ ಸಂಖ್ಯೆ 16ಕ್ಕೆ ಏರಿದೆ. ಶುಕ್ರವಾರ ರಾತ್ರಿ ವೇಳೆಗೆ ಎಂಟು ಮಂದಿ ಸಾವನ್ನಪ್ಪಿದ್ದ ಮಾಹಿತಿ ಸಿಕ್ಕಿದ್ದು, ಶನಿವಾರ ಈ ಸಂಖ್ಯೆ 16ಕ್ಕೆ ಏರಿಕೆಯಾಯಿತು. ಲಕ್ಷಾಂತರ ಮಂದಿಯನ್ನು ಮೊದಲೇ ಸ್ಥಳಾಂತರಿಸಿದ್ದರಿಂದ ಉಳಿದಂತೆ ಹೆಚ್ಚಿನ ಸಾವುನೋವುಗಳಾಗಿಲ್ಲ, ಪರಿಹಾರ ಕಾರ್ಯಾಚರಣೆ ನಡೆಯುತ್ತಿದೆ ಎಂದು ಒಡಿಶಾ ಸರಕಾರ ಹೇಳಿದೆ. ಶುಕ್ರವಾರ ಬೆಳಗ್ಗೆ ಫೋನಿ ಚಂಡಮಾರುತ ಪಶ್ಚಿಮ ಬಂಗಾಲ ಪ್ರವೇಶಿಸಿದರೂ ನಿರೀಕ್ಷಿಸಿದಷ್ಟು ಪ್ರತಾಪ ತೋರಿಲ್ಲ. ಆದರೆ ಭಾರೀ ಮಳೆಯಾಗಿದ್ದು, ಅಲ್ಲಲ್ಲಿ ಜನಜೀವನಕ್ಕೆ ತೊಂದರೆಯಾಗಿದೆ. ಶನಿವಾರ ಸಂಜೆ ವೇಳೆಗೆ ಫೋನಿ ಬಾಂಗ್ಲಾದೇಶ ಪ್ರವೇಶಿಸಿದೆ. ಬಾಂಗ್ಲಾದ ಮೂಲಗಳ ಪ್ರಕಾರ 14 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು ಎಂಟು ಜಿಲ್ಲೆಗಳಲ್ಲಿ ಫೋನಿಯ ಆರ್ಭಟ ಜೋರಾಗಿದೆ. ಮಡಿದವರಲ್ಲಿ ಒಂದು ಮಗು ಮತ್ತು 4 ಮಹಿಳೆಯರು ಸೇರಿದ್ದಾರೆ. ಈ ಮಧ್ಯೆ ಫೋನಿಯಂಥ ಭೀಕರ ಚಂಡಮಾರುತಕ್ಕೆ ನಲುಗಿದರೂ ಹೆಚ್ಚಿನ ಸಾವು ನೋವುಗಳು ಸಂಭವಿಸದ ಹಾಗೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡದ್ದಕ್ಕೆ ವಿಶ್ವಸಂಸ್ಥೆ ಭಾರತಕ್ಕೆ ಶ್ಲಾಘನೆ ವ್ಯಕ್ತಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next