Advertisement

ಪೆಟ್ರೋಲ್‌ ಬಂಕ್ ನಲ್ಲಿ ಟ್ಯಾಂಕರ್‌ಗೆ ಬೆಂಕಿ: ತಪ್ಪಿದ ದುರಂತ!

11:45 AM Mar 26, 2018 | udayavani editorial |

ಹೊಸದಿಲ್ಲಿ : ಮಧ್ಯ ಪ್ರದೇಶದಲ್ಲಿ ನಿನ್ನೆ ಭಾನುವಾರ ರಾತ್ರಿ ಪೆಟ್ರೋಲ್‌ ಪಂಪ್‌ ಒಂದರಲ್ಲಿ ಪೆಟ್ರೋಲ್‌ ವರ್ಗಾವಣೆ ಮಾಡುವ ವೇಳೆ ಟ್ಯಾಂಕರ್‌ಗೆ ಬೆಂಕಿ ಹೊತ್ತಿ ಕೊಂಡಾಗ ಅದರ ಚಾಲಕನು ಸಮಯಪ್ರಜ್ಞೆ ತೋರಿ ಧೈರ್ಯ ಸಾಹಸದಿಂದ ಟ್ಯಾಂಕರನ್ನು ಖಾಲಿ ಪ್ರದೇಶಕ್ಕೆ ಒಯ್ದು  ಭೀಕರ ಅವಘಡ ಸಂಭವಿಸುವುದನ್ನು ತಪ್ಪಿಸಿರುವ ಘಟನೆ ವರದಿಯಾಗಿದೆ. 

Advertisement

ಹೊತ್ತಿ ಉರಿಯುತ್ತಿದ್ದ ಟ್ಯಾಂಕರನ್ನು  ಚಾಲಕನು ಧೈರ್ಯದಿಂದ ಚಲಾಯಿಸಿಕೊಂಡು ಖಾಲಿ ಪ್ರದೇಶಕ್ಕೆ ಒಯ್ದು ನಿಲ್ಲಿಸಿದಾಗ ಧಾವಿಸಿ ಬಂದ ಅಗ್ನಿ ಶಾಮಕ ದಳದವರು ಬೆಂಕಿಯನ್ನು ನಂದಿಸುವಲ್ಲಿ ಸಫ‌ಲರಾದರು. 

#WATCH Truck driver Sajid who drove a burning petrol tanker truck away from a petrol pump in an attempt to save lives on 25th March, in Madhya Pradesh’s Narsignhpur (Mobile phone footage, quality as incoming) pic.twitter.com/LfhZenBulW

— ANI (@ANI) March 26, 2018

ಈ ಘಟನೆ ನಡೆದದ್ದು ಮಧ್ಯ ಪ್ರದೇಶದ ರಾಜಧಾನಿಯಾಗಿರುವ ಭೋಪಾಲ್‌ ನಿಂದ ಸುಮಾರು 220 ಕಿ.ಮೀ. ದೂರದಲ್ಲಿರುವ ನರಸಿಂಗಪುರದಲ್ಲಿ. 

Advertisement

ಟ್ಯಾಂಕರ್‌ನಿಂದ ಪಂಪ್‌ಗೆ ಪೆಟ್ರೋಲ್‌ ವರ್ಗಾವಣೆ ಮಾಡುವಾಗ ಟ್ಯಾಂಕರ್‌ ಗೆ ಹೇಗೆ ಬೆಂಕಿ ಹೊತ್ತಿಕೊಂಡಿತು ಎಂಬುದು ಗೊತ್ತಾಗಿಲ್ಲ. ಟ್ಯಾಕರ್‌ ಮುಂಭಾಗಕ್ಕೆ ಹೊತ್ತಿಕೊಂಡು ಬೆಂಕಿಯು ಕೂಡಲೇ ಭೂಗತ ಬಂಕರ್‌ಗಳಿಗೂ ತಾಗಿತು. ಇದರಿಂದ ಭಾರೀ ಸ್ಫೋಟವಾಗುವ ಸಾಧ್ಯತೆ ಇತ್ತು. 

ಆದರೆ ಇದನ್ನು ಮನಗಂಡ ಟ್ಯಾಂಕರ್‌ ಚಾಲಕನು ಒಡನೆಯೇ, ಹೊತ್ತಿ ಉರಿಯುತ್ತಿದ್ದ ಟ್ಯಾಂಕರನ್ನು ವಾಹನ ದಟ್ಟನೆಯ ರಸ್ತೆಯಲ್ಲೇ ಚಲಾಯಿಸಿಕೊಂಡು ಖಾಲಿ ಪ್ರದೇಶಕ್ಕೆ ಒಯ್ದು ಅಲ್ಲಿ ನಿಲಿಸುವಲ್ಲಿ ಸಫ‌ಲನಾದ. ಆತನ ಈ ಸಮಯ ಪ್ರಜ್ಞೆಯಿಂದ ಸಂಭಾವ್ಯ ಭಾರೀ ದುರಂತ ತಪ್ಪಿತು ಎಂದು ಅಗ್ನಿ ಶಾಮಕ ದಳದವರು ಹೇಳಿದರು. 

ಕೈಗೆ ಸುಟ್ಟಗಾಯಗಳಾಗಿರುವ ಟ್ಯಾಂಕರ್‌ ಚಾಲಕನನ್ನು ಆಸ್ಪತ್ರೆಗೆ ಒಯ್ಯುವಾಗ ಸ್ಥಳದಲ್ಲಿದ್ದವರು ಆತನ ಸಮಯ ಪ್ರಜ್ಞೆ, ಧೈರ್ಯ ಸಾಹಸ ಮೆಚ್ಚಿ ಚಪ್ಪಾಳೆ ಹೊಡೆದು ಅಭಿನಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next