Advertisement

ಮತ್ತೆ ಏರಿತು ತೈಲ ದರ!

06:00 AM May 15, 2018 | |

ಹೊಸದಿಲ್ಲಿ: ಕರ್ನಾಟಕ ವಿಧಾನಸಭೆ ಚುನಾವಣೆ ಮುಗಿಯುತ್ತಿದ್ದಂತೆ, 19 ದಿನಗಳಿಂದ ಸ್ಥಗಿತವಾಗಿದ್ದ ಪೆಟ್ರೋಲ್‌, ಡೀಸೆಲ್‌ ದರ ದಿಢೀರನೇ ಏರಿಕೆಯಾಗಿದೆ. ರವಿವಾರ ಮಧ್ಯರಾತ್ರಿಯಿಂದಲೇ ಜಾರಿವಾಗುವಂತೆ ಪೆಟ್ರೋಲ್‌ ದರ 17 ಪೈಸೆ, ಡೀಸೆಲ್‌ ದರ 21 ಪೈಸೆ ಏರಿಕೆಯಾಗಿದೆ.        

Advertisement

ತೈಲ ಕಂಪನಿಗಳ ಈ ನಿರ್ಧಾರದಿಂದಾಗಿ ದೇಶಾದ್ಯಂತ ಪೆಟ್ರೋಲ್‌,ಡೀಸೆಲ್‌ ದರ ದಾಖಲೆ ಮಟ್ಟದಲ್ಲಿ ಏರಿಕೆಯಾದಂತಾಗಿದೆ. ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಯಲ್ಲಿ ಸರಕಾರಿ ಸ್ವಾಮ್ಯದ ತೈಲ ಕಂಪನಿ ಗಳು ಕಳೆದ 3 ವಾರಗಳಿಂದ, ಅಂದರೆ ಏ.24 ರಿಂದ ತೈಲ ದರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ದರ ಹೆಚ್ಚಾಗುತ್ತಲೇ ಇದ್ದು, ತೈಲ ಕಂಪನಿಗಳಿಗೆ ಸುಮಾರು 500 ಕೋಟಿ ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ. ರವಿವಾರ ಮಧ್ಯರಾತ್ರಿಯ ಬದಲಾವಣೆ ಯಂತೆ ಬೆಂಗಳೂರಿನಲ್ಲಿ ಡೀಸೆಲ್‌ ದರ 67.31 ರೂ. ಪೆಟ್ರೋಲ್‌ ದರ 76.04 ರೂ.ಗಳಾಗಿದೆ. 

ಕಾಂಗ್ರೆಸ್‌ ಟೀಕೆ: ಚುನಾವಣೆ ಮುಗಿಯು ತ್ತಿದ್ದಂತೆ ತೈಲ ದರ ಏರಿಕೆ ಮಾಡಿರುವ ಕ್ರಮದ ಬಗ್ಗೆ ಕಾಂಗ್ರೆಸ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಚುನಾವಣೆವರೆಗೂ ದರ ಪರಿಷ್ಕರಣೆ ಮಾಡದ ಕೇಂದ್ರ ಸರಕಾರ ಇದೀಗ, ಮತ್ತೆ ದರ ಏರಿಕೆ ಮಾಡಿದೆ. ಕರ್ನಾಟಕ ಚುನಾವಣೆ ಗ್ರಾಹಕರಿಗೆ ಕೊಂಚ ಸಮಾಧಾನ ನೀಡಿತ್ತಷ್ಟೇ ಎಂದು ಕಾಂಗ್ರೆಸ್‌ ನಾಯಕ ಚಿದಂಬರಂ ವ್ಯಂಗ್ಯವಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next