Advertisement

ಬೇರೆ ಇಲಾಖೆಯವರ ನೇಮಕ ವಿರೋಧಿಸಿ ಮನವಿ

03:42 PM Sep 03, 2022 | Team Udayavani |

ಸಿಂಧನೂರು: ಅನ್ಯ ಇಲಾಖೆಯವರನ್ನು ತಾಪಂ ಇಒ ಆಗಿ ನೇಮಕ ಮಾಡಿರುವುದನ್ನು ವಿರೋಧಿಸಿ ಆರ್‌ಡಿಪಿಆರ್‌ ಅಧಿಕಾರಿಗಳ ಮತ್ತು ನೌಕರರ ಸಂಘದಿಂದ ಶುಕ್ರವಾರ ರಾಜ್ಯ ಸರಕಾರಕ್ಕೆ ತಾಪಂ ಇಒ ಮೂಲಕ ಮನವಿ ರವಾನಿಸಲಾಯಿತು.

Advertisement

ಸಂಘದ ಪದಾಧಿಕಾರಿಗಳು ಮಾತನಾಡಿ, ತಾಪಂ ಇಒ ಹುದ್ದೆಯು ಉಪವಿಭಾಗಾಧಿಕಾರಿ ದರ್ಜೆಯ ಜವಾಬ್ದಾರಿಯಾಗಿದೆ. 32 ಇಲಾಖೆಗಳ ಮೇಲ್ವಿಚಾರಣೆ, ಎಲ್ಲ ಇಲಾಖೆಯ ಬಿಲ್‌ಗ‌ಳಿಗೆ ಮೇಲು ರುಜು ಮಾಡುವ ಅಧಿಕಾರವನ್ನು ಹೊಂದಿದೆ. ನರೇಗಾ, ಈ ಸ್ವತ್ತು, ಸುವರ್ಣ ಗ್ರಾಮ, 15ನೇ ಹಣಕಾಸು, ಮುಖ್ಯಮಂತ್ರಿ ಗ್ರಾಮ ವಿಕಾಸ ಸೇರಿದಂತೆ ಅನೇಕ ಯೋಜನೆಗಳ ಮೇಲ್ವಿಚಾರಣೆ ತಾಪಂ ವ್ಯಾಪ್ತಿಯಲ್ಲಿದೆ. ಗ್ರಾಮೀಣಾಭಿವೃದ್ಧಿಯ ಮಹತ್ವದ ಕೆಲಸವನ್ನು ತಾಲೂಕು ಪಂಚಾಯತ್‌ ನಿರ್ವಹಿಸುತ್ತಿದ್ದು, ಗ್ರಾಪಂಗಳ ಪಾತ್ರ ಪ್ರಮುಖವಿದೆ. ಬೇರೆ ಇಲಾಖೆಗಳ ನೌಕರರನ್ನು ತಾಪಂಗೆ ನೇಮಕ ಮಾಡಿದರೆ, ಇಲಾಖೆಯ ಬಗ್ಗೆ ತಿಳಿದುಕೊಳ್ಳಲು 6 ತಿಂಗಳು ಬೇಕಾಗುತ್ತದೆ. ಗುತ್ತಿಗೆ ಒಪ್ಪಂದ ಮೂಲಕ ಪ್ರಕಾಶ್‌ ಎನ್ನುವವರನ್ನು ನೇಮಕ ಮಾಡಿದ್ದು, ಅದನ್ನು ರದ್ದುಗೊಳಿಸಬೇಕು. ಆರ್‌ಡಿಪಿಆರ್‌ ಅಧಿಕಾರಿಗಳ, ನೌಕರರ ಸಂಘದ ಬೇಡಿಕೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದರು.

ತಾಪಂ ಇಒ ಲಕ್ಷ್ಮೀದೇವಿ ಅವರು ಮನವಿ ಸರಕಾರಕ್ಕೆ ರವಾನಿಸಿದರು. ತಾಪಂ ಗ್ರಾಮೀಣಾಭಿವೃದ್ಧಿ ಎಡಿಎ ಅಮರಗುಂಡಪ್ಪ, ನರೇಗಾ ಸಹಾಯಕ ನಿರ್ದೇಶಕ ಮನೋಹರ್‌, ಪಿಡಿಒಗಳಾದ ಯಂಕಪ್ಪ ಕುರುಕುಂದಾ, ಸಿ.ಎಚ್‌. ಮುದುಕಪ್ಪ, ಹನೀಫ್‌, ದೀಪಾ ಅರಳಿಕಟ್ಟಿ, ಪೂರ್ಣಿಮಾ, ಸರೋಜಮ್ಮ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next