Advertisement

ಅವರಿಗೆ ವೈಯಕ್ತಿಕ ಹಿತಾಸಕ್ತಿಯೇ ಮುಖ್ಯ

11:44 PM Mar 31, 2019 | Sriram |

ಹೊಸದಿಲ್ಲಿ: ಕಾಂಗ್ರೆಸ್‌ ನೇತೃತ್ವದ ಯುಪಿಎ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿತ್ತು. ರಾಷ್ಟ್ರೀಯ ಹಿತಾಸಕ್ತಿಯನ್ನು ಕಡೆಗಣಿಸಿ ವೈಯಕ್ತಿಕ ಹಿತಾಸಕ್ತಿಯೇ ಮುಖ್ಯ ಎಂದು ಪರಿಗಣಿಸಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.

Advertisement

ಟಿವಿ9 ಭಾರತವರ್ಷ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಉಪಗ್ರಹ ನಿರೋಧಕ ಕ್ಷಿಪಣಿ ತಂತ್ರಜ್ಞಾನ ನಮ್ಮ ಬಳಿ ಇದ್ದರೂ ಅದನ್ನು ಪರೀಕ್ಷಿ ಸಲು ಕಾಂಗ್ರೆಸ್‌ ಸರಕಾರ ಮನಸು ಮಾಡಿರಲಿಲ್ಲ. ಕೆಲಸ ಮಾಡಿ ಎಂದು ಜನರು ಆಯ್ಕೆ ಮಾಡಿ ಕಳುಹಿಸಿದರೆ, ಕಾಂಗ್ರೆಸ್‌ ತನ್ನ ಜವಾಬ್ದಾರಿ ಮರೆ ತಿತ್ತು ಎಂದು ಮೋದಿ ಟೀಕಿಸಿದ್ದಾರೆ.ನಮ್ಮ ಸರಕಾರ ಬದ್ಧತೆಯಲ್ಲಿ ವಿಶ್ವಾಸ ಹೊಂದಿದೆ.

ಹಿಂದಿನ ಸರಕಾರವು ಕಪ್ಪು ಹಣ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಲು ವಿಳಂಬ ಮಾಡಿತ್ತು. ನಮ್ಮ ಸರಕಾರ ಅಸ್ತಿತ್ವಕ್ಕೆ ಬಂದ ಮೊದಲ ಸಂಪುಟ ಸಭೆಯಲ್ಲೇ ನಾವು ಎಸ್‌ಐಟಿ ರಚಿಸಲು ನಿರ್ಧರಿಸಿದೆವು. ವಿದೇಶದಿಂದ ಕಪ್ಪು ಹಣ ತರುವಲ್ಲಿ ಯುಪಿಎ ಸರಕಾರ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ವಿದೇಶದೊಂದಿಗೆ ನಮ್ಮ ಸರಕಾರದ ಒಪ್ಪಂದ ಬಲಹೀನವಾಗಿದ್ದವು ಎಂದು ಟೀಕಿಸಿದ್ದಾರೆ.

ನೀರವ್‌ ಮೋದಿಯ ಪರೋಕ್ಷ ಪ್ರಸ್ತಾಪ ಮಾಡಿದ ಪ್ರಧಾನಿ, ಆಗ ಫೋನ್‌ ಮಾಡಿದರೆ ಬ್ಯಾಂಕ್‌ಗಳು ಸಾಲ ನೀಡುತ್ತಿ ದ್ದವು. ಇಂತಹ ಬಹುತೇಕ ಸಾಲಗಳನ್ನು ಹಿಂದಿನ ಸಾಲ ಮರುಪಾವತಿಗಾಗಿ ನೀಡಲಾಗುತ್ತಿತ್ತು. ಇದನ್ನು ನಾವು ಬದಲಿಸಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next