Advertisement

ವೈಯಕ್ತಿಕ ಟೀಕೆಗೆ ಉತ್ತರಿಸಲ್ಲ: ಹೆಬ್ಟಾಳ್ಕರ್‌ 

06:35 AM Sep 08, 2018 | Team Udayavani |

ಬೆಳಗಾವಿ: “ವೈಯಕ್ತಿಕ ಟೀಕೆಗಳಿಗೆ ನಾನು ಉತ್ತರ ಕೊಡುವುದಿಲ್ಲ, ಅದಕ್ಕೆಲ್ಲ ಭಗವಂತ ಇದ್ದಾನೆ’ ಎಂದು
ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಟಾಳ್ಕರ್‌ ಮಾರ್ಮಿಕವಾಗಿ ಹೇಳಿದರು. 

Advertisement

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಈಶ್ವರ ಖಂಡ್ರೆ, ಸತೀಶ ಜಾರಕಿಹೊಳಿ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ನಮ್ಮದು, ಅವರದ್ದು ಎಂದು ಬೇರೆ ಬೇರೆ ಬಣವಿಲ್ಲ. ಒಮ್ಮತದ ಅಭ್ಯರ್ಥಿಗಳು ಆಯ್ಕೆ ಆಗಿದ್ದಾರೆ. ಎಲ್ಲವೂ ಸುಖಾಂತ್ಯ ಕಂಡಿದೆ. ವರಿಷ್ಠರು ಮಧ್ಯಪ್ರವೇಶಿಸಿ ಎಲ್ಲವನ್ನೂ ಬಗೆಹರಿಸಿದ್ದಾರೆ’ ಎಂದರು.

ಇದಕ್ಕೂ ಮುನ್ನ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಷಯದಲ್ಲಿ ಹೈಕಮಾಂಡ್‌
ಸೇರಿದಂತೆ ಪಕ್ಷದ ವರಿಷ್ಠರೆಲ್ಲರೂ ಮಾತನಾಡಿದ್ದಾರೆ. ನಾನು ಸಂಸ್ಕೃತಿ ಎಲ್ಲೆ ಮೀರಿ ಹೋಗಿಲ್ಲ. ನಾವು ಜವಾಬ್ದಾರಿ
ಸ್ಥಾನದಲ್ಲಿದ್ದೇವೆ. ಏಕವಚನದಲ್ಲಿ ಅಥವಾ ವೈಯಕ್ತಿಕ ಟೀಕೆಯಿಂದಾಗಲಿ ಏನನ್ನೂ ಸಾಧಿಸುವುದಿಲ್ಲ. ಜನ ನಮ್ಮನ್ನು
ಗಮನಿಸುತ್ತಿರುತ್ತಾರೆ ಎಂದರು.

ನಿರ್ದೇಶಕರಿಗೂ ಭದ್ರತೆ
ಹಿಂಡಲಗಾದ ಜಯನಗರದಲ್ಲಿರುವ ಶಾಸಕಿ ಲಕ್ಷ್ಮೀ ಹೆಬ್ಟಾಳ್ಕರ್‌ ಅವರ ಕಚೇರಿಯಿಂದ ಶುಕ್ರವಾರ ಬೆಳಗ್ಗೆ 9
ನಿರ್ದೇಶಕರು ಸೇರಿದಂತೆ ಬೆಂಬಲಿಗರು ಪಿಎಲ್‌ಡಿ ಬ್ಯಾಂಕ್‌ಗೆ ಆಗಮಿಸುವಾಗ ಭದ್ರತೆ ಒದಗಿಸಲಾಗಿತ್ತು.
ಕಚೇರಿಯ ಸುತ್ತಲೂ ಪೊಲೀಸ್‌ ಬಂದೋಬಸ್ತ್ ನಿಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next