Advertisement

ದಾನ ಮಾಡಲೂ ಜಿಲ್ಲಾಡಳಿತ ಅನುಮತಿ ಕಡ್ಡಾಯ: ಚರ್ಚೆಗೆ ಕಾರಣವಾಯಿತು ಆದೇಶ

04:30 PM Apr 20, 2020 | Team Udayavani |

ಚಿಕ್ಕಬಳ್ಳಾಪುರ: ಕೋವಿಡ್-19 ಸೋಂಕು ತಡೆಯುವ ನಿಟ್ಟಿನಲ್ಲಿ ‌ಕೇಂದ್ರ, ರಾಜ್ಯ ಸರ್ಕಾರಗಳ ಆದೇಶದಂತೆ‌ ಜಿಲ್ಲಾಡಳಿತ ಲಾಕ್ ಡೌನ್ ಘೊಷಣೆ ಮಾಡಿದೆ. ಇದರ ನಡುವೆ ಬಡವರಿಗೆ, ನಿರ್ಗತಿಕರಿಗೆ ಬೇಕಾದ ದಿನಸಿ, ಆಹಾರ ವಿತರಣೆಗೆ ಜಿಲ್ಲಾಡಳಿತದ ಅನುಮತಿ ಕಡ್ಡಾಯಗೊಳಿಸಿ ಹೊರಡಿಸಿರುವ ಆದೇಶ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Advertisement

ಜಿಲ್ಲೆಯಲ್ಲಿ‌ ಕೋವಿಡ್-19 ಸೋಂಕು ಕಾಣಿಕೊಂಡು ಸರ್ಕಾರ ಲಾಕ್ ಡೌನ್ ಘೋಷಿಸಿದ ನಂತರ ಜನ ಸಾಮಾನ್ಯರಿಗೆ ಅದರಲ್ಲೂ ಬಡವರಿಗೆ ದಾನಿಗಳು ಉದಾರತೆಯಿಂದ ಮುಂದೆ ಬಂದು ಅವಶ್ಯಕತೆ‌ ಇರುವರಿಗೆ ಅಗತ್ಯ ಆಹಾರ, ದಿನಸಿ ಕಿಟ್ ಸೇರಿದಂತೆ ಮಾಸ್ಕ್, ಸ್ಯಾನಿಟೈಸರ್ ಗಳನ್ನು ಉಚಿತವಾಗಿ ನೀಡುವ ಮೂಲಕ ಸರ್ಕಾರದ ಜೊತೆಗೆ ಕೈ ಜೋಡಿಸಿವೆ. ಆದರೆ ದಾನ ಮಾಡುವ‌ ಮೊದಲು‌ ಜಿಲ್ಲಾಡಳಿತ ಅನುಮತಿ ಪಡೆಯಬೇಕೆಂದು ಹೊರಡಿಸಿರುವ ಆದೇಶ ದಾನಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಜನರ ಓಡಾಟ ಕಡಿಮೆ ಮಾಡಲು ಜಿಲ್ಲಾಡಳಿತ ಈ ಆದೇಶ ಹೊರಡಿಸಿದ್ದರೂ, ಈವರೆಗೆ ಯಾವುದೇ ಪ್ರತಿಫಲ ಅಪೇಕ್ಷಿಸದೇ ಜನರಿಗೆ ಸಹಾಯವಗುತ್ತಿದ್ದವರ ಕಾರ್ಯಕ್ಕೆ ಇದಿರಂದ ನಿರಾಸೆಯಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಜನರು ನೀಡುವ ವಸ್ತುಗಳನ್ನು ಜಿಲ್ಲಾಡಳಿತ ಸಂಗ್ರಹಿಸಿ ಅಗತ್ಯವಿರುವವರಿಗೆ ನೀಡಬೇಕು ಎಂಬ ಸಲಹೆಗಳೂ ಜನರಿಂದ ಕೇಳಿ ಬರುತ್ತಿದೆ.

ಆದೇಶದಲ್ಲಿ ‌ಏನಿದೆ?

ಜಿಲ್ಲೆಯಲ್ಲಿ ಲಾಕ್ ಡೌನ್ ಘೊಷಣೆ ಹಿನ್ನಲೆಯಲ್ಲಿ ಹಲವು ಸಂಘ, ಸಂಸ್ಥೆಗಳು ಸ್ವಯಂ ಘೋಷಣೆಯಿಂದ ಉಚಿತವಾಗಿ ವಿತರಣೆ ಮಾಡುತ್ತಿರುವುದು ಒಳ್ಳೆಯ‌ ಉದ್ದೇಶವಾಗಿದ್ದು ಅವರನ್ನು ಅಭಿನಂದನೆ ಸಲ್ಲಿಸುತ್ತೆದೆ. ಆದರೆ ಸದ್ಯ ಸೀಲ್ ಡೌನ್ ಇರುವ ಕಾರಣ ದಿನಸಿ ಮತ್ತಿತರ ವಸ್ತುಗಳನ್ನು ಹಂಚುವ ಮೊದಲು ಜಿಲ್ಲಾಡಳಿತದ ಅನುಮತಿ ಪಡೆಯಬೇಕು. ಇಲ್ಲದೇ ಹೋದರೆ‌ ಕಾನೂನು ಕ್ರಮ ಜರುಗಿಸಲಾಗುತ್ತದೆಯೆಂದು ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next