Advertisement

ಪೆರ್ಲ : ಪ್ರೀತಿಸಿ ವಿವಾಹವಾದ ಯುವ ದಂಪತಿ ನೇಣು ಬಿಗಿದು ಆತ್ಮಹತ್ಯೆ

09:36 PM Jun 04, 2022 | Team Udayavani |

ಪೆರ್ಲ : ಒಂದೂವರೆ ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾದ ಯುವ ದಂಪತಿ ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

Advertisement

ಎಣ್ಮಕಜೆ ಗ್ರಾಮ ಪಂಚಾಯತ್‌ನ ಪಡ್ರೆ ಸರ್ಪಮಲೆ ಶೆಟ್ಟಿಬೈಲಿನಲ್ಲಿ ಜೂ. 3ರಂದು ರಾತ್ರಿ ಸರ್ಪಮಲೆ ಶೆಟ್ಟಿಬೈಲಿನ ಬಾಬು ಅವರ ಪುತ್ರ ವಸಂತ(24), ಪೆರ್ಲ ಕಜಂಪಾಡಿಯ ಬಾಲಕೃಷ್ಣ ಅವರ ಪುತ್ರಿ ಶರಣ್ಯಾ(20) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬದಿಯಡ್ಕ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದರು. ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ಮೆಡಿಕಲ್‌ ಕಾಲೇಜು ಆಸ್ಪತ್ರೆಗೆ ಮೃತದೇಹವನ್ನು ಕೊಂಡೊಯ್ಯಲಾಗಿದೆ. ಶಾಲಾ ಶಿಕ್ಷಣ ಪಡೆಯುತ್ತಿದ್ದಾಗಲೇ ಇವರು ಪರಸ್ಪರ ಪ್ರೀತಿಸುತ್ತಿದ್ದರೆನ್ನಲಾಗಿದೆ. 2021 ಜನವರಿ ತಿಂಗಳಲ್ಲಿ ಸಂಬಂಧಿಕರ ಉಪಸ್ಥಿತಿಯಲ್ಲಿ ವಿವಾಹವಾಗಿತ್ತು.

ಸಾಲದ ಹೊರೆಯಿಂದ ನೇಣಿಗೆ ಶರಣಾಗಿದ್ದಾರೆಂದು ಸಂಬಂಧಿಕರು ಸಂಶಯ ವ್ಯಕ್ತಪಡಿಸಿದ್ದಾರೆ. ವಸಂತ ಕಟ್ಟಡ ನಿರ್ಮಾಣದ ಕಾರ್ಮಿಕನಾಗಿ ದುಡಿಯುತ್ತಿದ್ದರು. ಆದರೆ ಸುಮಾರು ಸಮಯದಿಂದ ಕೆಲಸ ಕಡಿಮೆಯಾಗಿತ್ತೆನ್ನಲಾಗಿದೆ.

ಇದನ್ನೂ ಓದಿ : ಪೂಜಾ ಸ್ಥಳಗಳ ಕಾಯ್ದೆ: ಸುಪ್ರೀಂಕೋರ್ಟ್ ಗೆ ಮತ್ತೊಂದು ಅರ್ಜಿ ಸಲ್ಲಿಕೆ

Advertisement
Advertisement

Udayavani is now on Telegram. Click here to join our channel and stay updated with the latest news.

Next