Advertisement

Periyapatna; ಪತ್ರಿಕಾ ವಿತರಕ, ರೈತ ದೇವರಾಜು ಆತ್ಮಹತ್ಯೆ

09:28 PM Jul 16, 2023 | Team Udayavani |

ಪಿರಿಯಾಪಟ್ಟಣ : ಪಟ್ಟಣದಲ್ಲಿ ಪತ್ರಿಕಾ ವಿತರಕರಾಗಿ ಸೇವೆಸಲ್ಲಿಸುತ್ತಿದ್ದ ಅಂಕನಹಳ್ಳಿ ಗ್ರಾಮದ ರೈತ ದೇವರಾಜು ಭಾನುವಾರ ಸಾಲಬಾದೆಯಿಂದ ಆತ್ಮಹತ್ಯೆಗೆ ಶರಣಾಗಿದ್ಧಾರೆ.

Advertisement

ತಾಲೂಕಿನ ಅಂಕನಹಳ್ಳಿ ಗ್ರಾಮದಲ್ಲಿ ಮೂಲತಃ ರೈತರಾಗಿದ್ದ ದೇವರಾಜು(42) ಬೆಳಗಿನ ವೇಳೆ ಆಂದೋಲನ, ಉದಯವಾಣಿ, ಸಂಯುಕ್ತ ಕರ್ನಾಟಕ, ಕೆಮ್ಮುಗಿಲು, ಪ್ರಜಾನುಡಿ ಪ್ರತಿನಿಧಿ ಸೇರಿದಂತೆ ಮತ್ತಿತರ ದಿನಪತ್ರಿಕೆಗಳನ್ನು ವಿತರಣೆ ಮಾಡುವ ಕೆಲಸವನ್ನು ಮಾಡುತ್ತಿದ್ದರು.

ಮಳೆಗಾಲ ವಿಳಂಬವಾಗಿ ತಾವು ಜಮೀನಿನಲ್ಲಿ ಬೆಳೆದ ಬೆಳೆ ಸರಿಯಾಗಿ ಬಾರದೆ ಸಾಲಬಾದೆಯಿಂದ ಮನನೊಂದಿದ್ದ ಈತ ತಮ್ಮ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ಧಾರೆ ಎಂದು ಮೃತರ ಪತ್ನಿ ಗೌರಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಇವರ ಹೆಸರಿನಲ್ಲಿ 1.28ಎಕರೆ ಜಮೀನಿದ್ದು ವ್ಯವಸಾಯಕ್ಕೆ ವಿವಿಧ ಬ್ಯಾಂಕುಗಳು, ಸಹಕಾರ ಸಂಘಗಳು, ಅಂದಾಜು 8 ಲಕ್ಷ ಸಾಲ ಮಾಡಿದ್ದು, ಸಾಲಭಾದೆಯಿಂದ ಮನನೊಂದು ನೇಣಿಗೆ ಶರಣಾಗಿದ್ಧಾನೆ. ಈತನಿಗೆ ಒಬ್ಬ ಮಗ ಮತ್ತು ಒಬ್ಬ ಮಗಳು ಇದ್ದಾಳೆ. ಮೃತದೇಹವನ್ನು ಶವಪರೀಕ್ಷೆ ನಡೆಸಿದ ನಂತರ ನಂದಿಪುರ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next