Advertisement

ಪರಿಶ್ರಮದಿಂದಲೇ ಸಾಧನೆ: ಹೆಪ್ಸಿಬಾ ರಾಣಿ

09:04 PM May 01, 2019 | Sriram |

ಉಡುಪಿ: ವಿದ್ಯಾರ್ಥಿಗಳು ಜೀವನದಲ್ಲಿ ದೊಡ್ಡದಾದ ಗುರಿ, ಚಿಂತನೆ ಹೊಂದಿ, ಉತ್ತಮ ಸಾಧನೆಯೇ ಧ್ಯೇಯವಾಗಬೇಕು. ಅದಕ್ಕಾಗಿ ನಿರಂತರ ಪರಿಶ್ರಮ ಪಡಬೇಕು. ಪರಿಶ್ರಮದ ಫ‌ಲವಾಗಿ ಸಮಾಜವು ನಮ್ಮನ್ನು ಗುರುತಿಸುವುದೇ ನಮಗೆ ಸಂತೃಪ್ತಿ ನೀಡುತ್ತದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅಭಿಪ್ರಾಯಪಟ್ಟರು.

Advertisement

ಉಡುಪಿ ನೇತ್ರ ಜ್ಯೊತಿ ಕಾಲೇಜ್‌ ಆಫ್ ಆಫ್ಟಮೆಟ್ರಿ ಹಾಗೂ ಪ್ಯಾರಾ ಮೆಡಿಕಲ್‌ ಸೈನ್ಸ್‌ನ ವಾರ್ಷಿಕ ದಿನಾಚರಣೆಯನ್ನು ಅವರು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಇಂಡಿಯನ್‌ ಮೆಡಿಕಲ್‌ ಅಸೋಸಿಯೇಶನ್‌ ಉಡುಪಿ ಕರಾವಳಿ ಅಧ್ಯಕ್ಷ ಡಾಣ ಗುರುಮೂರ್ತಿ ಭಟ್‌, ನೇತ್ರತಜ್ಞ ಡಾಣ ಚಿನ್ನಪ್ಪ ಎ.ಜಿ., ನಿರ್ದೇಶಕರಾದ ಡಾಣ ಕೃಷ್ಣಪ್ರಸಾದ್‌ ಕೂಡ್ಲು, ವೀಣಾ ರಾವ್‌, ರಶ್ಮಿ ಕೃಷ್ಣಪ್ರಸಾದ್‌, ಕಾಲೇಜಿನ ಅಭಿವೃದ್ಧಿ ಅಧಿಕಾರಿ ಅಬ್ದುಲ್‌ ಖಾದರ್‌, ಪ್ರಸಾದ್‌ ನೇತ್ರಾಲಯದ ಆಡಳಿತಾಧಿಕಾರಿ ಎಂ.ವಿ. ಆಚಾರ್ಯ, ಪ್ರೊಣ ಗಿರಿಧರ್‌ ಕಂಠಿ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ರಮ್ಯಾ ಸ್ವಾಗತಿಸಿ, ಪ್ರಾಂಶುಪಾಲ ರಾಜೀವ್‌ ಮಂಡಲ್‌ ವರದಿ ವಾಚಿಸಿದರು. ಶಿಫಾ ನಿರೂಪಿಸಿ, ಮಾಲತಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next