Advertisement

ಪೆರ್ಡೂರು ಪಕ್ಕಾಲು: ಮರಕ್ಕೆ ಕಾರು ಢಿಕ್ಕಿ , ಚಾಲಕ ಸಾವು  

01:00 AM Mar 13, 2019 | Harsha Rao |

ಹೆಬ್ರಿ :  ಹಿರಿಯಡಕದಿಂದ ಪೆರ್ಡೂರು ಕಡೆ ಬರುತ್ತಿದ್ದ ಕಾರೊಂದು ಪಕ್ಕಾಲು ತಿರುವು ಬಳಿ ರಸ್ತೆ ಬದಿಯ ಮರವೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದ್ದು ಓರ್ವ ಮೃತಪಟ್ಟ ಘಟನೆ ಮಂಗಳವಾರ ಸಂಭವಿಸಿದೆ.

Advertisement

ಬೆಳ್ತಂಗಡಿ ಮೂಲದವರು ಎನ್ನಲಾದ ಕಾರು ಚಾಲಕ ಪ್ರಶಾಂತ ಜಿ.ಐ  ಮೃತಪಟ್ಟಿದ್ದು ಕಾರಿನಲ್ಲಿದ್ದ ರಾಜೇಶ್‌ ,ಪ್ರಸಾದ್‌,ಪ್ರಶಾಂತ ಬಿ. ತೀವ್ರ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಹಿರಿಯಡಕದ ಮುತ್ತೂರಿ ನಲ್ಲಿರುವ ಟಿನ್‌ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಯುವಕರು ಸಂಜೆ 5ಗಂಟೆ ಹೊತ್ತಿಗೆ ಹಿರಿಯಡಕದಿಂದ ಪೆರ್ಡೂರು ಕಡೆ  ಕಾರಿನಲ್ಲಿ ಹೋಗುತ್ತಿದ್ದರು.

ಈ ಸಂದರ್ಭ ಪಕ್ಕಾಲು ತಿರುವಿನ ಬಳಿ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಕಾರು ಗದ್ದೆಗೆ ಉರುಳಿದ್ದು ಅಪಘಾತದ ತೀವ್ರತೆಗೆ  ಕಾರು ಸಂಪೂರ್ಣ ಜಖಂ ಗೊಂಡಿದೆ.

ಅಪಘಾತದ ಶಬ್ದ ಕೇಳಿದ ಹತ್ತಿರನ ಮನೆಯವರು ಕೂಡಲೇ ಬಂದು ಕಾರಿನ ಒಳಗೆ ಸಿಲುಕಿದ್ದವರನ್ನು ಹೊರಗೆಳೆದರು.  ಕೂಡಲೇ ಸ್ಥಳಕ್ಕೆ ಆಗಮಿಸಿದ ಆ್ಯಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಸಾಗಿಸುವ ಮೊದಲೇ ಚಾಲಕ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Advertisement

ಅಪಾಯ ಕಾರಿ ತಿರುವು 
ಪೆರ್ಡೂರಿನಿಂದ ಹಿರಿಯಡಕ ಹೋಗುವ ಮಧ್ಯ ಪಕ್ಕಾಲು ತಿರುವು ಕಿರಿದಾದ ರಸ್ತೆಯಿಂದ ಕೂಡಿದ್ದು ಈ ಭಾಗದಲ್ಲಿ ಅಪಘಾತಗಳಿಂದ ಪ್ರಾಣ ಕಳೆದು ಕೊಂಡವರು ಹೆಚ್ಚು. ಕಡಿದಾದ ತಿರುವು ಇದ್ದರೂ ಇಲ್ಲಿ ಯಾವುದೇ ನಾಮ ಫಲಕ ಅಳವಡಿಸಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next