Advertisement

ದಾವಣಗೆರೆ: ಕಂಟೈನ್ಮೆಂಟ್ ಝೋನ್ ಮಾಡಲು ಜನರ ವಿರೋಧ

09:41 AM May 13, 2020 | keerthan |

ದಾವಣಗೆರೆ: ಕೋವಿಡ್-19 ಪಾಸಿಟಿವ್ ಬಂದ ವ್ಯಕ್ತಿಯ ಏರಿಯಾವನ್ನು ಕಂಟೈನ್ಮೆಂಟ್ ವಲಯವನ್ನಾಗಿ ಮಾಡಲು ಜಿಲ್ಲಾಡಳಿತ ಮುಂದಾಗಿದ್ದು, ಇದಕ್ಕೆ ಜನರು ತಡೆಯೊಡ್ಡಿದ ಘಟನೆ ಇಂದು ನಡೆದಿದೆ.

Advertisement

22 ವರ್ಷದ ಕೋವಿಡ್-19 ಸೋಂಕಿತ ಕೇಸ್ ನಂಬರ್ 847 ವ್ಯಕ್ತಿಯ ಪ್ರದೇಶ ದಾವಣಗೆರೆಯ ಶಿವನಗರವನ್ನು ಕಂಟೈನ್ಮೆಂಟ್ ಮಾಡಲು ಜಿಲ್ಲಾಡಳಿತ ಮುಂದಾಗಿತ್ತು. ಆದರೆ ಒಂದೇ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಸೀಲ್ ಡೌನ್‌ ಮಾಡ್ತಿರಾ ಎಂದು ಆರೋಪಿಸಿದ ಶಿವನಗರ ನಿವಾಸಿಗಳು ಸೀಲ್ ಡೌನ್ ಮಾಡದಂತೆ ಅಡ್ಡಿಪಡಿಸಿದ್ದಾರೆ.

ಅಜ್ಮೀರ್‌ನಿಂದ ದಾವಣಗೆರಗೆ ಆಗಮಿಸಿದ್ದ 22 ವರ್ಷದ ಯುವಕನಿಗೆ ಸೋಂಕು ಬಂದಿದೆ ಆದ ಕಾರಣ ಸೀಲ್ ಡೌನ್ ಮಾಡಲಾಗುತ್ತದೆ ಎಂದು ಜಿಲ್ಲಾಡಳಿತ ಹೇಳಿದೆ. ಈ ಕಾರಣದಿಂದ ಪೊಲೀಸರಿಗೆ ಹಾಗೂ ನಿವಾಸಿಗಳ ನಡುವೆ ವಾಗ್ವಾದವೂ ನಡೆಯಿತು.

ಸೆಕ್ಷನ್ 144 ಜಾರಿಯಲ್ಲಿದ್ದರೂ ಭಾರಿ ಸಂಖ್ಯೆಯಲ್ಲಿ ಜನರು ಬೀದಿಗಿಳಿದು ಸೆಕ್ಷನ್ ಉಲ್ಲಂಘಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next