Advertisement

ಟಿಎಂಸಿ ಅಂದರೆ ”ಟೆರರಿಸಂ-ಮಾಫಿಯಾ-ಕರಪ್ಷನ್”: ನಡ್ಡಾ ಕಿಡಿ

06:49 PM Feb 12, 2023 | Team Udayavani |

ಕೋಲ್ಕತಾ: ಟಿಎಂಸಿಯನ್ನು ‘ಟೆರರಿಸಂ(ಭಯೋತ್ಪಾದನೆ), ಮಾಫಿಯಾ ಮತ್ತು ಕರಪ್ಷನ್ (ಭ್ರಷ್ಟಾಚಾರ) ಪರವಾಗಿ ನಿಂತಿರುವ ಪಕ್ಷ ಎಂದು ಬಣ್ಣಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಪಶ್ಚಿಮ ಬಂಗಾಳದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಅನುಷ್ಠಾನದಲ್ಲಿ ದೊಡ್ಡ ಅಕ್ರಮಗಳನ್ನು ಎಸಗಿದ್ದಾರೆ ಎಂದು ಭಾನುವಾರ ಆರೋಪಿಸಿದ್ದಾರೆ.

Advertisement

ಪಶ್ಚಿಮ ಬಂಗಾಳದ ಪುರ್ಬಾ ಮೇದಿನಿನಗರದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ತೃಣಮೂಲ ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯ ಸ್ಥಗಿತಗೊಳಿಸಲಾಗಿದೆ ಎಂದು ಪ್ರತಿಪಾದಿಸಿದ ನಡ್ಡಾ, ಬಿಜೆಪಿಯು ಮಮತಾ ಬ್ಯಾನರ್ಜಿಯ ಜಂಗಲ್ ರಾಜ್ ಅನ್ನು ಕೊನೆಗೊಳಿಸಲಿದೆ ಎಂದು ಹೇಳಿದರು.

ಈ ಪುಣ್ಯಭೂಮಿ ದೇಶದ ರಾಜಕೀಯ ಸಂಸ್ಕೃತಿಗೆ ಸೈದ್ಧಾಂತಿಕ ದಿಕ್ಕನ್ನು ನೀಡಿದೆ. ತೃಣಮೂಲದ ಸಂಕುಚಿತ ರಾಜಕಾರಣದಿಂದಾಗಿ ಸಾರ್ವಜನಿಕರು ದೌರ್ಜನ್ಯ ಮತ್ತು ಅವ್ಯವಸ್ಥೆಯಿಂದ ಬಳಲುತ್ತಿದ್ದಾರೆ. ರಾಜ್ಯದಲ್ಲಿ ಉತ್ತಮ ಆಡಳಿತ ಸ್ಥಾಪಿಸಲು ಬಿಜೆಪಿ ಸಂಕಲ್ಪ ಮಾಡಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next