Advertisement

ಬಿಜೆಪಿ ಭ್ರಷ್ಟಾಚಾರದ ಲೆಕ್ಕವನ್ನು ಜನ ಚುಕ್ತಾ ಮಾಡಲಿದ್ದಾರೆ:ಅನ್ಸಾರಿ

09:53 PM Feb 25, 2023 | Team Udayavani |

ಗಂಗಾವತಿ: ಕಾಂಗ್ರೆಸ್ ಅಭಿವೃದ್ಧಿ ಪರವಾಗಿ ಆಡಳಿತ ನಡೆಸಿದರೆ ಬಿಜೆಪಿ ಶೇ.40 ರಷ್ಟು ಲಂಚದ ಭ್ರಷ್ಠಾಚಾರ ನಡೆಸಿದ್ದು 2023 ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಬಿಜೆಪಿಯ ಲೆಕ್ಕ ಚುಕ್ತಾ ಮಾಡಲಿದ್ದಾರೆಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿದರು.

Advertisement

ಅವರು ನಗರದ ಮಹೆಬೂಬ ನಗರ ಮತ್ತು ಗೌಶಿಯ ಕಾಲೋನಿಗಳಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ “ಅಭಿವೃದ್ಧಿಯಾಗಿ ಅನ್ಸಾರಿ ಆಗಮನ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಗೃಹ ಲಕ್ಷ್ಮೀ, ಗೃಹಜ್ಯೋತಿ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತರಲಾಗುವುದು, ಭ್ರಷ್ಟ ಬಿಜೆಪಿ ಸರ್ಕಾರದ ಕಾರ್ಯವೈಖರಿಗೆ ಜನ ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಲಿದ್ದಾರೆ, ಬಡ ಮಕ್ಕಳಿಗೆ ಸಮವಸ್ತ್ರ,ಶೂ, ಲ್ಯಾಪ್ಟಾಪ್ ವಿತರಿಸದೆ ಅನ್ಯಾಯ ಮಾಡಿದೆ, ಅನ್ನಭಾಗ್ಯ ಅಕ್ಕಿಯಲ್ಲಿ 2 ಕೆಜಿ ಕಡಿತ ಮಾಡಿದೆ, ಬಿಜೆಪಿ ಅಕ್ರಮ ನೇಮಕಾತಿ, ಕಮಿಷನ್ ದಂಧೆ,ಬೆಲೆ ಏರಿಕೆ ವಿರುದ್ಧ ಜನ ರೋಸಿ ಹೋಗಿದ್ದಾರೆ ಮತ್ತು ಗಂಗಾವತಿ ಕ್ಷೇತ್ರಕ್ಕೆ ಚುನಾವಣೆಗೆ ಹೊಸ ಪಕ್ಷದಿಂದ ಸ್ಪರ್ಧಿಸಲು ವ್ಯಕ್ತಿ ಒಬ್ಬರು ಬಂದಿದ್ದಾರೆ ಅವರ ಬಣ್ಣದ ಮಾತಿಗೆ ಯುವಕರು ಮತ್ತು ಕ್ಷೇತ್ರದ ಜನತೆ ಬಲಿಯಾಗಬೇಡಿ, ನಾನು ನಿಮ್ಮವನು ನಿಮ್ಮ ಜೊತೆ ಇರುತ್ತೇನೆ ಆಶೀರ್ವಾದ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷ ಶ್ಯಾಮಿದ್ ಮನಿಯರ್ ನಗರಸಭಾ ಸದಸ್ಯರಾದ ಮನೋಹರ್ ಸ್ವಾಮಿ ಹಿರೇಮಠ, ಕಾಶಿಮ್ ಸಾಬ್ ಗದ್ವಾಲ್, ಈ.ರಾಘವೇಂದ್ರ, ಪಕ್ಷದ ಹಿರಿಯ ನಾಯಕರಾದ ಎಸ್. ಬಿ. ಖಾದ್ರಿ, ಮಾಜಿ ಸದಸ್ಯರಾದ ಕಮಲಿ ಬಾಬಾ, ಪಕ್ಷದ ನಾಯಕರಾದ ಗಿರೀಶ್ ಗಾಯಕ್ವಾಡ್, ಜ್ಯೋತಿ ಸಿಂಗ್, ದುರ್ಗೇಶ್ ದೊಡ್ಡಮನಿ,ಸಲೀಂ, ಗಿಡ್ಡ ಹುಸೇನ್, ಮಂಜು, ಫಯಾಜ್, ದಾವುಲ್, ಗೌಸ್ ಮತ್ತು ಮೈಬೂಬ ನಗರ ಮತ್ತು ಗೌಸಿಯ ಕಾಲೋನಿಯ ಕಾಂಗ್ರೆಸ್ ಪಕ್ಷದ ನಾಯಕರುಗಳು ಮತ್ತು ಸಾವಿರಾರು ಕಾರ್ಯಕರ್ತರು, ಮಹಿಳೆಯರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next