Advertisement

ಮುಂಬೈಯಿಂದ ಯಾದಗಿರಿಗೆ ಬಂದಿಳಿದ ಜನ

07:13 AM Jun 02, 2020 | Suhan S |

ಯಾದಗಿರಿ: ಮುಂಬೈಯಿಂದ ಸೋಮವಾರ ಬೆಳಗ್ಗೆ ಬಿಟ್ಟಿದ್ದ ಉದ್ಯಾನ್‌ ರೈಲು ರಾತ್ರಿ 8:30ರ ಸುಮಾರಿಗೆ ನಗರದ ನಿಲ್ದಾಣಕ್ಕೆ ಬಂದು ತಲುಪಿತು.

Advertisement

ರೈಲಿನ ಮೂಲಕ ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿದ್ದ ಜಿಲ್ಲೆಯ 120ಕ್ಕೂ ಹೆಚ್ಚು ಜನರು ಬಂದಿರುವ ಮಾಹಿತಿ ಲಭ್ಯವಾಗಿದೆ. ರೈಲು ಇಳಿಯುವುದಕ್ಕೂ ಮುನ್ನ ಪ್ರಯಾಣಿಕರು ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್ ಧರಿಸುವಂತೆ ಎಚ್ಚರಿಕೆ ಮೂಡಿಸಲಾಯಿತು. ರೈಲಿನಿಂದ ಇಳಿದ ಪ್ರಯಾಣಿಕರನ್ನು ಒಬ್ಬೊಬ್ಬರಾಗಿ ಸ್ಕ್ರೀನಿಂಗ್‌ ಮಾಡಿ ಕೈಗೆ ಶೀಲ್‌ ಹಾಕಲಾಯಿತು. ಪ್ರಯಾಣಿಕರ ವಿವರ ನೋಂದಾಯಿಸಿಕೊಂಡು ರೈಲು ನಿಲ್ದಾಣದ ಆವರಣಲ್ಲಿ ನಿಲ್ಲಿಸಿದ್ದ 3 ಸಾರಿಗೆ ಬಸ್‌ಗಳ ಮೂಲಕ ನೇರವಾಗಿ ಕ್ವಾರಂಟೈನ್‌ ಗೆ ಕರೆದುಕೊಂಡು ತೆರಳಲಾಯಿತು. ಎಲ್ಲರನ್ನು ವಿವಿಧ ಕ್ವಾರಂಟೈನ್‌ ಕೇಂದ್ರಗಳಲ್ಲಿ 14 ದಿನಗಳ ಕಾಲ ಇರಿಸಲಾಗುವುದು ಎನ್ನುವ ಮಾಹಿತಿ ಲಭ್ಯವಾಗಿದೆ.

ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌, ಎಸ್‌ಪಿ ಋಷಿಕೇಶ ಸೋನಾವಣೆ ನಿಲ್ದಾಣದಲ್ಲಿದ್ದು ಪ್ರಯಾಣಿಕರ ಸ್ಕ್ರೀನಿಂಗ್‌, ವಿವಿರ ನೋಂದಣಿ ಹಾಗೂ ಸ್ಟಾಂಪಿಂಗ್‌ ಕಾರ್ಯ ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next