Advertisement

ಆಧಾರ್‌ ನೋಂದಣಿಗೆ ಜನರ ಪರದಾಟ

04:06 PM Oct 26, 2019 | Team Udayavani |

ಕೊರಟಗೆರೆ: ಆಧಾರ್‌ ನೋಂದಣಿ ಮತ್ತು ತಿದ್ದುಪಡಿಗೆ ಟೋಕನ್‌ಗಾಗಿ ರಾತ್ರಿಯಿಂದ ಬೆಳಗ್ಗೆಯವರೆಗೆ ಸರದಿ ಸಾಲಿನಲ್ಲಿ ನಿಲ್ಲುವಂತಹ ಪರಿಸ್ಥಿತಿ ತಾಲೂಕಿನಲ್ಲಿ ಸೃಷ್ಟಿಯಾಗಿದೆ.

Advertisement

ಪಟ್ಟಣದ ಎಸ್‌ಬಿಐ ಬ್ಯಾಂಕ್‌ ಮುಂದೆ ಆಧಾರ್‌ ನೋಂದಣಿ ಮತ್ತು ತಿದ್ದುಪಡಿಗಾಗಿ ಟೋಕನ್‌ ಪಡೆಯಲು ಪ್ರತಿನಿತ್ಯ ಸುಮಾರು 200ರಿಂದ 300 ಜನ ಸರದಿ ಸಾಲಿನಲ್ಲಿ ನಿಲ್ಲು ವಂತಾಗಿದೆ. ಆದರೆ ದಿನಕ್ಕೆ ಕೇವಲ ದಿನಕ್ಕೆ 25 ಮಂದಿಗಷ್ಟೇ ಟೋಕನ್‌ ನೀಡ ಲಾಗುತ್ತಿದ್ದು, ಉಳಿದವರು ಬರಿಗೈಲಿ ಮನೆಗೆ ವಾಪಸ್‌ ಹೋಗಬೇಕು. ರಾತ್ರಿ 8 ಗಂಟೆಯಿಂದ ಬೆಳಗ್ಗೆ ಎಸ್‌ಬಿಐ ಬ್ಯಾಂಕ್‌ ತೆರೆಯುವವರೆಗೆ ಮಕ್ಕಳು ಹೆಣ್ಣು, ಮಕ್ಕಳು, ವೃದ್ಧರು ಮತ್ತು ಯುವಕರು ಟೋಕನ್‌ ಪಡೆಯಲು ಕ್ಯೂ ನಿಲ್ಲುತ್ತಾರೆ.

ಮಳೆ, ಗಾಳಿ, ಚಳಿ ಎನ್ನದೆ ಬ್ಯಾಂಕ್‌ ಮುಂದೆ ರಾತ್ರಿಯೇ ಬಂದು ಕೂರುತ್ತಾರೆ. ಪ್ರತಿನಿತ್ಯ ವಿದ್ಯಾರ್ಥಿಗಳು ಶಾಲಾ- ಕಾಲೇಜು ಬಿಟ್ಟು, ಸಾರ್ವಜನಿಕರು, ರೈತರು ದಿನ ನಿತ್ಯ ಚಟುವಟಿಕೆ ಮುಂದುವರೆಸಲಾಗದೆ ಸಾಲಿನಲ್ಲಿ ನಿಂತು ಟೋಕನ್‌ ಪಡೆಯುವಂತಹ ಪರಿಸ್ಥಿತಿ ಉಂಟಾಗಿದೆ. ಸಮಸ್ಯೆಯು ತಾಲೂಕಿನಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು, ಕ್ಷೇತ್ರದ ಜನಪ್ರತಿ ನಿಧಿಗಳು, ದಂಡಾಧಿಕಾರಿಗಳು ಮತ್ತು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಕೊಡಲೇ ಕ್ರಮ ತೆಗೆದುಕೊಂಡು ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಆಧಾರ್‌ ನೋಂದಣಿ ಕೇಂದ್ರ ಪ್ರಾರಂಭಿಸ ಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next