Advertisement

ನಿಯಮ ಗಾಳಿಗೆ ತೂರಿ ಕೋವಿಡ್‌ ಲಸಿಕೆಗೆ ಮುಗಿಬಿದ್ದ ಜನ 

06:15 PM Aug 03, 2021 | Team Udayavani |

ಲೋಕಾಪುರ: ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್‌ ಲಸಿಕೆ ಪಡೆದುಕೊಳ್ಳಲು ನಿಯಮ ಮೀರಿ ಮುಗಿಬಿದ್ದ ಪರಿಣಾಮ ಕೆಲ ಕಾಲ ಗೊಂದಲ ಸೃಷ್ಟಿಯಾಗಿತ್ತು.

Advertisement

ಸೋಮವಾರ ಬೆಳಗ್ಗೆಯಿಂದ ನೂರಾರು ಜನ ಜಮಾಯಿಸಿದ್ದರು. ಲಸಿಕೆಗಾಗಿ ಸಾಮಾಜಿಕ ಅಂತರವಿಲ್ಲದೆ ಗುಂಪು- ಗುಂಪಾಗಿ ಸೇರಿದ್ದರು. ಕೊರೊನಾ ಮೂರನೇ ಅಲೆ ಹಿನ್ನೆಯಲ್ಲಿ ಲಸಿಕೆ ಪಡೆದುಕೊಳ್ಳಲು ಹೆಚ್ಚಿನ ಜನರು ಬರುತ್ತಿದ್ದಾರೆ. ಮೂರನೇ ಅಲೆಯ ಕೊರೊನಾ ಸೋಂಕು ತಡೆಗಟ್ಟಲು ಪ್ರತಿಯೊಬ್ಬರು ಕಡ್ಡಾಯವಾಗಿ ಲಸಿಕೆ ಪಡೆಯಬೇಕಿದೆ.

ಮೊದಲು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹೋಗುತ್ತಿದ್ದ ಜನರಲ್ಲಿ ಲಸಿಕೆಯ ಬಗ್ಗೆ ಜಾಗೃತಿ ಮೂಡಿದೆ. ಈ ಹಿನ್ನೆಲೆಯಲ್ಲಿ ಜನರು ಲಸಿಕೆ ಹಾಕಿಸಿಕೊಳ್ಳಲು ಬರುತ್ತಿದ್ದಾರೆ. ಇಂದು ಆರಂಭವಾಗಿರುವ ಲಸಿಕಾ ಅಭಿಯಾನ ನಿರಂತರವಾಗಿ ನಡೆಯಲಿದೆ ಎಂದು ಡಾ|ಕವಿತಾ ಬೂದಿಹಾಳ ಹೇಳಿದರು. ರೋಗಿಗಳಿಗೆ ಯಾವುದೇ ಅಡ್ಡ ಪರಿಣಾಮಗಳಿದ್ದರೆ ಪ್ಯಾರಾಸಿಟಮಲ್‌ ಮಾತ್ರೆ ತೆಗೆದುಕೊಳ್ಳುವಂತೆ ಹೇಳುತ್ತೇವೆ.

ಲಸಿಕೆ ತೆಗೆದುಕೊಳ್ಳಲು ಜನ ಮುಂದೆ ಬರುತ್ತಿರುವುದು ಉತ್ತಮ ಬೆಳವಣಿಗೆ ಯಾಗಿದೆ ಎಂದು ಡಾ| ವಿನಯ ಕುಲಕರ್ಣಿ ಹೇಳಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಆರೋಗ್ಯ ಇಲಾಖೆ ಸಿಬ್ಬಂದಿ ತಕ್ಷಣ ಜನರ ನಿಯಂತ್ರಣಕ್ಕೆ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಿದ್ದರು. ನಂತರ ಜನರು ಲಸಿಕೆ ಪಡೆಯಲು ಸರತಿ ಸಾಲುಗಳಲ್ಲಿ ನಿಂತರು.

Advertisement

Udayavani is now on Telegram. Click here to join our channel and stay updated with the latest news.

Next