Advertisement

ಪಾಪ ಮಾಡಿದವರಿಗೆ ಕ್ಯಾನ್ಸರ್‌ ಬರುವುದಂತೆ!

06:20 AM Nov 24, 2017 | Team Udayavani |

ಹೊಸದಿಲ್ಲಿ: “ಕ್ಯಾನ್ಸರ್‌ನಂಥ ಮಾರಕ ಕಾಯಿಲೆಗಳು ನಿಮ್ಮ ಪಾಪದ ಫ‌ಲ’. ಹೀಗೆ ಹೇಳಿ ವಿವಾದದ ಸುಳಿಯಲ್ಲಿ ಸಿಲುಕಿರುವವರು ಅಸ್ಸಾಂ ಆರೋಗ್ಯ ಸಚಿವ ಹಿಮಾಂತ ಬಿಸ್ವಾ ಶರ್ಮಾ. ಬಿಸ್ವಾರ ಈ ಹೇಳಿಕೆಗೆ ದೇಶದ ಎಲ್ಲಾ ವರ್ಗಗಳ ಜನರಿಂದ ಟೀಕೆ ವ್ಯಕ್ತವಾಗುತ್ತಿದೆ. “ನಾವು ಪಾಪ ಮಾಡಿದರೆ ದೇವರೇ ನಮಗೆ ನರಳುವಂಥ ಶಿಕ್ಷೆ ನೀಡುತ್ತಾನೆ. 

Advertisement

ಕ್ಯಾನ್ಸರ್‌ನಿಂದ ನರಳುವ, ಅಪಘಾತದಿಂದ ಮೃತರಾಗುವ ಯುವ ಜನರ ಹಿನ್ನೆಲೆಯನ್ನು ನೋಡಿ. ಅದು ದೇವರೇ ನೀಡುವ ನ್ಯಾಯ’ ಎಂದಿದ್ದಾರೆ ಶರ್ಮಾ. ಇದಕ್ಕೆ ಟ್ವಿಟರ್‌ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಶರ್ಮಾ ಅವರ ತಿಳಿವಳಿಕೆ ಕುರಿತು ಟೀಕಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next