Advertisement

ಜನ ಹಿಡಿದು ಕೊಟ್ಟ ಕಳ್ಳನನ್ನು ಕದ್ರಿ ಪೊಲೀಸರು ಬಿಟ್ಟು ಕಳುಹಿಸಿದರೆ? 

02:14 PM Jan 12, 2017 | |

ಮಂಗಳೂರು: ಇಲ್ಲಿನ ಸಿಟಿ ಬಸ್‌ ನಿಲ್ದಾಣದಲ್ಲಿ ಜೇಬುಗಳ್ಳನೊಬ್ಬನನ್ನು ಯುವಕನೊಬ್ಬ  ಬೆನ್ನತ್ತಿ  ಸಾರ್ವಜನಿಕರ ನೆರವಿನಿಂದ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಬುಧವಾರ ಸಂಜೆ ನಡೆದಿದೆ. ಆದರೆ ಪೊಲೀಸರು ಕಳ್ಳನನ್ನೇ ಬಿಟ್ಟು ಕಳುಹಿಸಿ ಬೇಜವಾಬ್ದಾರಿ  ತೋರಿರುವ ಆರೋಪ ಕೇಳಿ ಬಂದಿದೆ. 

Advertisement

ಪುನೀತ್‌ ಎಂಬಾತ ಕಳ್ಳನನ್ನು ಬೆನ್ನಟ್ಟಿ ಹಿಡಿದಿದ್ದು, ಈ ವೇಳೆ ಆತನ ಮೇಲೂ ಹಲ್ಲೆ ನಡೆದಿತ್ತು. ಸಾರ್ವಜನಿಕರ ನೆರವಿನಿಂದ ಕದ್ರಿ ಪೊಲೀಸ್‌ ಠಾಣೆಗೆ ಎಳೆದೊಯ್ದು ದೂರು ನೀಡಿ ವಾಪಾಸಾಗಿದ್ದಾರೆ. 

ದೂರು ನೀಡಿ ಪುನೀತ್‌ ವಾಪಾಸಾದ ಕೆಲ ಹೊತ್ತಲ್ಲಿ ಕಳ್ಳನನ್ನು ಪೊಲೀಸರು ಬಿಟ್ಟು ಕಳುಹಿಸಿದ್ದು, ಪುನೀತ್‌ ಆರೋಪಿ ಎಲ್ಲಿ ಎಂದು ಕೇಳಿದಾಗ ಪೊಲೀಸರು ಆವಾಜ್‌ ಹಾಕಿದ್ದು, ದೂರು ಕೊಟ್ಟಿದ್ದಿರಲ್ಲಾ ನೀವಿನ್ನು ಹೊರಡಿ ಎಂದು ಗದರಿದ್ದಾರೆ ಎಂದು ಆರೋಪಿಸಲಾಗಿದೆ. 

ಪುನೀತ್‌ ಅವರು ಪೊಲೀಸರ ಬೇಜವಾಬ್ದಾರಿ  ತನದ ವಿರುದ್ಧ ಮಂಗಳೂರು ಪೊಲೀಸ್‌ ಆಯುಕ್ತರ ಕಚೇರಿಗೆ ತೆರಳಿ ದೂರು ನೀಡಲು ಮುಂದಾಗಿದ್ದು, ಗೃಹ ಸಚಿವ ಜಿ.ಪರಮೇಶ್ವರ್‌ ಅವರಿಗೂ ದೂರು ನೀಡಲು ನಿರ್ಧರಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next