Advertisement

Pension: ಕೇಂದ್ರ ಸರ್ಕಾರಕ್ಕೆ 20,000 ರೂ. ದಂಡ!

08:07 PM Nov 05, 2023 | Team Udayavani |

ನವದೆಹಲಿ: 96ರ ವಯಸ್ಸಿನ ಸ್ವಾತಂತ್ರ್ಯ ಹೋರಾಟಗಾರರೊಬ್ಬರಿಗೆ ಪಿಂಚಣಿ ನೀಡದ ಕಾರಣ ದೆಹಲಿ ಹೈಕೋರ್ಟ್‌ ಕೇಂದ್ರ ಸರ್ಕಾರಕ್ಕೆ 20,000ರೂ.ಗಳ ದಂಡ ವಿಧಿಸಿದೆ. ಸ್ವಾತಂತ್ರ್ಯ ಹೋರಾಟಗಾರ ಉತ್ತಮ್‌ ಸಿಂಗ್‌ ಲಾಲ್‌ ಅವರನ್ನು ಪಿಂಚಣಿ ನೀಡದೇ 40 ವರ್ಷಗಳ ಕಾಲ ಕಾಯಿಸಲಾಗಿದೆ. ಜತೆಗೆ ತಮ್ಮ ಹಕ್ಕುಬದ್ಧ ಹಣವನ್ನು ಪಡೆಯುವುದಕ್ಕೂ ಸಿಂಗ್‌ ಸರ್ಕಾರಿ ಕಚೇರಿಗಳ ಕಂಬ ಕಂಬವನ್ನೂ ಸುತ್ತುವಂತೆ ಮಾಡಲಾಗಿದೆ. ಇದು ಸರ್ಕಾರದ ದುಸ್ಥಿತಿಯನ್ನು ಪ್ರತಿನಿಧಿಸುತ್ತದೆ.

Advertisement

ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಈ ರೀತಿ ನಡೆಸಿಕೊಳ್ಳುವುದು ದುರದೃಷ್ಟಕರ ಎಂದು ನ್ಯಾ. ಸುಬ್ರಮಣಿಯನ್‌ ಪ್ರಸಾದ್‌ ಅವರ ನ್ಯಾಯಪೀಠ ಹೇಳಿದೆ. ಸರ್ಕಾರಕ್ಕೆ 20 ಸಾವಿರ ದಂಡ ವಿಧಿಸುವುದರ ಜತೆಗೆ ಮುಂದಿನ 12 ವಾರಗಳ ಒಳಗೆ 1980ರಿಂದ ಈವರೆಗೆ ಸಿಂಗ್‌ ಅವರಿಗೆ ನೀಡಬೇಕಿದ್ದ ಪಿಂಚಣಿ ಹಣವನ್ನು ಬಡ್ಡಿ ಸಮೇತ ನೀಡುವಂತೆ ಆದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next