Advertisement

ಪ್ರಮಾಣ ವಚನದಲ್ಲಿ ಪೇಜಾವರ ಶ್ರೀ ಉಪಸ್ಥಿತಿ

12:05 AM May 31, 2019 | Team Udayavani |

ಉಡುಪಿ: ಮೋದಿಯವರು 2ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀಗಳು ಪಾಲ್ಗೊಂಡರು. ಬುಧವಾರ ಮಂಗಳೂರು ಕಾವೂರಿನಲ್ಲಿ ರಾಘವೇಂದ್ರ ಸ್ವಾಮಿಗಳ ವೃಂದಾವನ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶ್ರೀಗಳು ಬೆಂಗಳೂರು ಮೂಲಕ ಹೊಸದಿಲ್ಲಿಗೆ ತಡರಾತ್ರಿ ತಲುಪಿದರು.

Advertisement

ಗುರುವಾರ ಏಕಾದಶಿ, ದಿಲ್ಲಿಯಲ್ಲಿ 40 ಡಿಗ್ರಿ ದಾಟಿದ ಉಷ್ಣಾಂಶವಿದ್ದರೂ ನಿರ್ಜಲ ಉಪವಾಸದಲ್ಲಿದ್ದ 88ರ ಹರೆಯದ ಶ್ರೀಗಳು, ದಿಲ್ಲಿಯ ಮಠದಲ್ಲಿ ಅನುಷ್ಠಾನ ನಡೆಸಿ, ಪ್ರಮಾಣವಚನದಲ್ಲಿ ಪಾಲ್ಗೊಂಡರು.

ಗುರುವಾರ ತಡರಾತ್ರಿ ಬೆಂಗಳೂರಿಗೆ, ಅಲ್ಲಿಂದ ವಿಮಾನದಲ್ಲಿ ಮಂಗಳೂರಿಗೆ ಬಂದು ದ್ವಾದಶಿ ಪೂಜೆಯನ್ನು ಕಾವೂರಿನಲ್ಲಿ ಶುಕ್ರವಾರ ಮುಂಜಾನೆ ನೆರವೇರಿಸುವರು. ಬಳಿಕ, ಬೆಳಗ್ಗೆ ಶ್ರೀಕೃಷ್ಣ ಮಠದಲ್ಲಿ ನಡೆಯುವ ಸುವರ್ಣಗೋಪುರದ ವಿವಿಧ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅಪರಾಹ್ನ ಮೈಸೂರಿಗೆ ತೆರಳುವರು.

Advertisement

Udayavani is now on Telegram. Click here to join our channel and stay updated with the latest news.

Next