Advertisement

ಪೆಗಾಸಸ್‌ ಬೇಹು ನಿಜವಾದಲ್ಲಿ, ಅದು ಗಂಭೀರ ವಿಚಾರ: ಸುಪ್ರೀಂ

09:04 PM Aug 05, 2021 | Team Udayavani |

ನವದೆಹಲಿ: “ಪೆಗಾಸಸ್‌ಗೆ ಸಂಬಂಧಿಸಿದ ಬೇಹುಗಾರಿಕೆ ಆರೋಪವು ನಿಜವೇ ಆಗಿದ್ದಲ್ಲಿ, ಅದೊಂದು ಗಂಭೀರ ವಿಚಾರ’ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

Advertisement

ಜತೆಗೆ, ಈ ಕುರಿತು ತನಿಖೆಗೆ ಆಗ್ರಹಿಸಿ ಸಲ್ಲಿಸಿರುವ ಅರ್ಜಿಯ ಪ್ರತಿಯೊಂದನ್ನು ಕೇಂದ್ರ ಸರ್ಕಾರಕ್ಕೂ ಕಳುಹಿಸಿಕೊಡುವಂತೆ ಅರ್ಜಿದಾರರಾದ ಎಡಿಟರ್ಸ್‌ ಗಿಲ್ಡ್‌ ಆಫ್ ಇಂಡಿಯಾ ಮತ್ತು ಹಿರಿಯ ಪತ್ರಕರ್ತ ಎನ್‌.ರಾಮ್‌ ಅವರಿಗೆ ಸೂಚಿಸಿದೆ.

“ಪೆಗಾಸಸ್‌ ಕುರಿತು ಬಂದಿರುವ ವರದಿಗಳು ಸತ್ಯವೇ ಆಗಿದ್ದಲ್ಲಿ, ಅದೊಂದು ಗಂಭೀರ ವಿಚಾರ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಪ್ರಕರಣವು 2019ರಲ್ಲೇ ಒಮ್ಮೆ ವರದಿಯಾಗಿತ್ತು. ಆದರೂ, ಈ ಕುರಿತು ಅರ್ಜಿ ಸಲ್ಲಿಕೆಗೆ ಇಷ್ಟೊಂದು ವಿಳಂಬವಾಗಿದ್ದೇಕೆ’ ಎಂದು ಸಿಜೆಐ ಎನ್‌.ವಿ.ರಮಣ ನೇತೃತ್ವದ ನ್ಯಾಯಪೀಠ ಪ್ರಶ್ನಿಸಿದೆ.

ಜತೆಗೆ, ನೀವು ಅರ್ಜಿಯ ಪ್ರತಿಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟರೆ, ಸರ್ಕಾರದ ಪರವಾಗಿ ಯಾರಾದರೂ ಇಲ್ಲಿಗೆ ಬಂದು ನೋಟಿಸ್‌ ಸ್ವೀಕರಿಸಲು ಸಾಧ್ಯ ಎಂದು ಹೇಳಿ, ವಿಚಾರಣೆಯನ್ನು ಆ.10ಕ್ಕೆ ಮುಂದೂಡಿದೆ. ಇಸ್ರೇಲ್‌ನ ಎನ್‌ಎಸ್‌ಒ ಸಂಸ್ಥೆಯ ಬೇಹು ತಂತ್ರಾಂಶ ಬಳಸಿ ಕೇಂದ್ರ ಸರ್ಕಾರವು ರಾಜಕಾರಣಿಗಳು, ಪತ್ರಕರ್ತರು ಸೇರಿದಂತೆ ಹಲವು ಗಣ್ಯರ ಮೇಲೆ ಬೇಹುಗಾರಿಕೆ ನಡೆಸಿದೆ ಎಂಬ ಆರೋಪಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ಗೆ ಒಟ್ಟಾರೆ 9 ಅರ್ಜಿಗಳು ಸಲ್ಲಿಕೆಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next