Advertisement

Padubidri ಪಾದಚಾರಿಗೆ ಬೈಕ್‌ ಢಿಕ್ಕಿ: ಮೂಳೆ ಮುರಿತ

09:58 PM Aug 18, 2023 | Team Udayavani |

ಪಡುಬಿದ್ರಿ: ಉಚ್ಚಿಲ ಬಸ್‌ ನಿಲ್ದಾಣದಿಂದ ಇಳಿದು ಎರ್ಮಾಳು ಕಡೆಗೆ ನಡೆದು ಬರುತ್ತಿದ್ದ ಎಂ.ಎ. ಸುಬೈರ್‌ (54) ಅವರಿಗೆ ಆ. 15ರ ರಾತ್ರಿಯ ವೇಳೆ ಉಚ್ಚಿಲದ ಕಡೆಯಿಂದ ಬಂದ ಬೈಕ್‌ ಸವಾರ ಆರೋಪಿ ಉಮೇಶ್‌, ರಾಘವೇಂದ್ರ ಮಠದ ರಸ್ತೆ ಬಳಿ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ ಸುಬೈರ್‌ ಅವರ ಮೂಳೆ ಮುರಿತವಾಗಿದೆ.

Advertisement

ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next