Advertisement

Bantwal ಸರಪಾಡಿಯ ಪೆರ್ಲ: ಜೀವ ಬೆದರಿಕೆ, ಪ್ರಕರಣ ದಾಖಲು

01:21 AM Jan 11, 2024 | Team Udayavani |

ಬಂಟ್ವಾಳ: ವ್ಯಕ್ತಿಯೊಬ್ಬರ ಸ್ವಾಧೀನದ ಜಾಗಕ್ಕೆ ಅಕ್ರಮವಾಗಿ ಪ್ರವೇಶಗೈದು ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿದ ಘಟನೆ ಸರಪಾಡಿ ಗ್ರಾಮದ ಪೆರ್ಲದಲ್ಲಿ ನಡೆದಿದೆ.

Advertisement

ಪೆರ್ಲ ನಿವಾಸಿ ಸಮಿತ್‌ ಕುಮಾರ್‌ ಅವರು ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ಬಂಟ್ವಾಳ ನಿವಾಸಿ ಗೋವಿಂದ ಪ್ರಭು ಹಾಗೂ ಸಹಚರರಾದ ರಶೀದ್‌, ಮುಸ್ತಾಫಾ, ದಯಾನಂದ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ತನ್ನ ವರ್ಗದ ಕುಮ್ಕಿಯನ್ನು ಅವರೆಲ್ಲ ಸೇರಿ ಕಾನೂನು ಬಾಹಿರ ದಾಖಲೆ ಮಾಡುವ ಪ್ರಯತ್ನದಲ್ಲಿದ್ದ ವೇಳೆ ಸಂಬಂಧಪಟ್ಟ ಪ್ರಾಧಿಕಾರಕ್ಕೆ ದೂರನ್ನು ನೀಡಿದ್ದೇನೆ.

ಆದರೆ ಅವರು ಡಿ. 9ರಂದು ನಮ್ಮ ಸ್ವಾಧೀನದ ಜಾಗಕ್ಕೆ ಬಂದು ಬೆದರಿಕೆ ಒಡ್ಡಿರುವ ಪರಿಣಾಮ ನಾನು ಮಾನಸಿಕವಾಗಿ ನೊಂದಿದ್ದು, ಜೀವಿಸಲು ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next