Advertisement

ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಶಾಂತಿ ಸಭೆ 

03:20 PM Feb 09, 2018 | |

ಸುರತ್ಕಲ್‌ : ಸಮಾಜದಲ್ಲಿ ಶಾಂತಿ ಕಾಪಾಡುವಲ್ಲಿ ಯುವ ಸಮುದಾಯದ ಪಾತ್ರ ಮಹತ್ವದ್ದಾಗಿದ್ದು ಶಾಂತಿ ಸಭೆಯಂತಹ ಪ್ರಮುಖ ಸಭೆಗಳಿಗೆ ಅವರನ್ನು ಕರೆ ತರುವ ಕೆಲಸ ಆಗಬೇಕಾಗಿದೆ ಎಂದು ಪಣಂಬೂರು ವಿಭಾಗೀಯ ಎಸಿಪಿ ರಾಜೇಂದ್ರ ಹೇಳಿದರು. ಸುರತ್ಕಲ್‌ ಪೊಲೀಸ್‌ ಠಾಣೆ ವತಿಯಿಂದ ಆಯೋಜಿಸಲಾದ ಶಾಂತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Advertisement

ಬೀಟ್‌ ಪೊಲೀಸ್‌ ಬಲಪಡಿಸಲು ಕ್ರಮ
ಸಂಘ-ಸಂಸ್ಥೆಗಳು ಹಲವು ಇದ್ದು ಅದರ ಪ್ರಮುಖರು, ಪದಾಧಿಕಾರಿಗಳು ಭಾಗವಹಿಸಿ ಸಲಹೆ-ಸೂಚನೆ ನೀಡಬೇಕು. ವಿವಿಧ ಸಮಾಜದ ಧಾರ್ಮಿಕ ಮುಖಂಡರು ಶಾಂತಿ ಸಾಮರಸ್ಯ ಕಾಪಾಡಲು ನೀಡುವ ಕೊಡುಗೆ ಶ್ಲಾಘನೀಯ. ಬೀಟ್‌ ಪೊಲೀಸ್‌ ಪದ್ಧತಿಯನ್ನು ಇನ್ನಷ್ಟು ಬಲಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಇದೇ ಸಂದರ್ಭ ಟ್ರಾಕ್‌ ಸಂಚಾರ ನಿರ್ವಹಣೆ ಕುರಿತಾಗಿ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಯಿತು.

ಸುರತ್ಕಲ್‌ ಠಾಣೆಯ ಪ್ರಭಾರ ಇನ್‌ ಸ್ಪೆಕ್ಟರ್‌ ಮಂಜುನಾಥ್‌, ಎಸ್‌ಐ ಪೂವಪ್ಪ, ಮಹಾಬಲ ಪೂಜಾರಿ ಕಡಂಬೋಡಿ,
ಯೋಗೀಶ್‌ ಸನಿಲ್‌, ಧಾರ್ಮಿಕ ಸಂಘದ ಮುಖಂಡರು, ಆಟೋ ರಿಕ್ಷಾ , ಕಾರು ಮತ್ತಿತರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next