Advertisement
ಅವರು ಸೋಮವಾರ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ರೈಟ್ಸ್ ಅವೇರ್ನೆಸ್ ಆ್ಯಂಡ್ ನಾಲೆಡ್ಜ್ಸೊಸೈಟಿ (ರ್ಯಾಂಕ್) ವತಿಯಿಂದ ಶಾಂತಿ, ಸೌಹಾರ್ದ ಹಾಗೂ ರಾಷ್ಟ್ರೀಯ ಭಾವೈಕ್ಯಕ್ಕಾಗಿ ನಡೆದ ಅಂತರ್ ಧರ್ಮೀಯ ಬೌದ್ಧಿಕ ಸಮಾವೇಶದಲ್ಲಿ ಮಾತನಾಡಿದರು.
Related Articles
Advertisement
ಹೊಸದಿಲ್ಲಿಯ ಮುಖ್ಯ ಇಮಾಮ್ ಡಾ| ಇಮಾಮ್ ಉಮರ್ ಅಹ್ಮದ್ ಇಲಿಯಾಸ್ ಮಾತನಾಡಿ, ನಮ್ಮ ಜಾತಿ-ಧರ್ಮಗಳು ಕೇವಲ ನಮ್ಮ ಮನೆಗೆ ಸೀಮಿತವಾಗಬೇಕು. ಆದರೆ ಸಮಾಜದಲ್ಲಿ ನಾವು ಭಾರತೀಯರಾಗಿ ಸಹೋದರತೆಯಿಂದ ಬದುಕುವುದನ್ನು ಕಲಿಯಬೇಕು. ಪರಸ್ಪರ ಆತ್ಮೀಯತೆಯಿಂದ ಬದುಕಿದಾಗ ದೇಶಕ್ಕೂ ಅದರಿಂದ ಒಳಿತಾಗುತ್ತದೆ ಎಂದರು.
ದ.ಕ. ಖಾಝಿ ಶೈಖುನ್ನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮಾತನಾಡಿ, ಶಾಂತಿಯೇ ಇಸ್ಲಾಂ ಧರ್ಮದ ಮೂಲ ಮಂತ್ರ ಎಂದರು. ಮಿಲಾಗ್ರಿಸ್ ಚರ್ಚ್ನ ಧರ್ಮಗುರು ರೆ| ಫಾ| ವಲೇರಿಯನ್ ಡಿ’ಸೋಜಾ ಮಾತನಾಡಿ, ಧರ್ಮಕ್ಕಿಂತಲೂ ನಾವು ಮೊದಲು ಮನುಷ್ಯರಾಗಿ ಬದುಕುವುದನ್ನು ಕಲಿಯಬೇಕು ಎಂದರು.ರಮೇಶ್ ಗುರೂಜಿ ಕಣ್ಣೂರು, ಉಳ್ಳಾಲ ದರ್ಗಾದ ಅಧ್ಯಕ್ಷ ಅಬ್ದುಲ್ ರಶೀದ್ ಉಪಸ್ಥಿತರಿದ್ದರು.ರ್ಯಾಂಕ್ನ ಅಧ್ಯಕ್ಷ ಡಾ| ಎಂ.ಎನ್. ಕೃಷ್ಣಮೂರ್ತಿ ಸ್ವಾಗತಿಸಿದರು.