Advertisement

ಪಿಡಿಒರನ್ನು ಕಾರಿನಲ್ಲಿ ಕರೆದೊಯ್ದು ದರೋಡೆ: ನಾಲ್ವರ ಬಂಧನ

07:06 AM Jun 21, 2020 | Lakshmi GovindaRaj |

ನೆಲಮಂಗಲ: ಚನ್ನರಾಯಪಟ್ಟಣದ ನುಗ್ಗೇಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಜಿ. ಹರೀಶ್‌ ಅವರನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ದರೋಡೆ ಮಾಡಿದ್ದ ಆರೋಪಿಗಳನ್ನು ನೆಲಮಂಗಲ ಪೊಲೀ ಸರು ಬಂಧಿಸಿದ್ದಾರೆ. ಬಳಿಕ  ಹೆಚ್ಚುವರಿ ಎಸ್‌ಪಿ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಚೇತನ್‌(38), ನಸ್ರುಲ್ಲಾ(43), ಕೃಷ್ಣಸಿಂಗ್‌ (40), ಸುರೇಂದ್ರ(30) ಬಂಧಿತ ಆರೋಪಿಗಳು.

Advertisement

ಅವರು ಮೇ.8ರಂದು ಬೆಳಗ್ಗೆ 9ರ ಸುಮಾರಿಗೆ ನಗರದ ಕುಣಿಗಲ್‌ ಬೈಪಾಸ್‌ ಬಳಿ ಸ್ಕಾರ್ಪಿಯೋ ಕಾರಿನಲ್ಲಿ ಬಂದು ಅವರ ಬಳಿಯಿದ್ದ 2,000 ಹಣ, ಲ್ಯಾಪ್‌ ಟಾಪ್‌, ಮೊಬೈಲ್‌, ಎಟಿಎಂ ತೆಗೆದು ಕೊಂಡು, ಪಿನ್‌ ನಂಬರ್‌ ಪಡೆದು 29,700 ಹಣ ತೆಗೆದುಕೊಂಡು ಸೊಂಪುರ ಕೈಗಾರಿಕೆ ಪ್ರದೇಶದಲ್ಲಿ ಬಿಟ್ಟು  ಹೋಗಿದ್ದರು. ಅದರ ಬಗ್ಗೆ ಹರೀಶ್‌ ದೂರು ಸಲ್ಲಿಕೆ ಮಾಡಿದ್ದರು.

ಪ್ರಕರಣ ಬೇಧಿಸಲು ಬೆನ್ನಲು ಹತ್ತಿದ ಡಿವೈಎಸ್‌ಪಿ ಮೋಹನ್‌ ಕುಮಾರ ಹಾಗೂ ವೃತ್ತನಿರೀಕ್ಷಕ ಶಿವಣ್ಣ ತಂಡ ನಾಲ್ಕು ಜನ ಆರೋಪಿಗಳನ್ನು ಬಂಧಿಸಿ, ಎರಡು ಲಾಂಗ್‌,  ಚಾಕು, ಲ್ಯಾಪ್‌ಟಾಪ್‌, ಮೊಬೈಲ್‌ ಒಂದು ಕೆಎ 04 ಎಂಸಿ 9076 ಸ್ಕಾರ್ಪಿಯೋ ಕಾರು ವಶಪಡಿಸಿಕೊಂಡಿದ್ದಾರೆ. ಸಂದರ್ಭ ದಲ್ಲಿ ಅಪರ ಪೊಲೀಸ್‌ ಅಧೀಕ್ಷಕ ಸುಜಿತ್‌, ಡಿವೈ ಎಸ್‌ಪಿ ಮೋಹನ್‌ಕುಮಾರ, ವೃತ್ತ ನಿರೀಕ್ಷಕ ಶಿವಣ್ಣ, ವೀರೇಂದ್ರ  ಪ್ರಸಾದ್‌, ಸಬ್‌ಇನ್‌ಸ್ಪೆಕ್ಟರ್‌ ಡಿ.ಆರ್‌ ಮಂಜುನಾಥ್‌, ಡಿ.ಚಿಕ್ಕನರ ಸಿಂಹಯ್ಯ, ಮೋಹನ್‌ ಹಾಗೂ ಸಿಬ್ಬಂದಿ ಕಾರ್ಯಾ ಚರಣೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next