Advertisement

ಶಾಲೆ ಶುರುವಾಗುವವರೆಗೂ ಸಂಬಳ ನೀಡಿ

06:26 AM May 27, 2020 | Suhan S |

ರೋಣ: ಬಿಸಿಯೂಟ ಕಾರ್ಯಕರ್ತೆಯರಿಗೆ ಶಾಲೆ ಪ್ರಾರಂಭವಾಗುವವರೆಗೆ ಪೂರ್ಣ ವೇತನ ಹಾಗೂ ಜೀವನ ನಿರ್ವಹಣೆಗೆ ಪರಿಹಾರ ಒದಗಿಸಬೇಕು ಎಂದು ಅಕ್ಷರ ದಾಸೋಹ ನೌಕರರ ಸಂಘದ ತಾಲೂಕು ಸಮಿತಿ ವತಿಯಿಂದ ಮಂಗಳವಾರ ತಾಪಂ ಇಒ ಸಂತೋಷ ಪಾಟೀಲ ಹಾಗೂ ಅಕ್ಷರ ದಾಸೋಹ ಅಧಿಕಾರಿ ಬಸವರಾಜ ಅಂಗಡಿ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

Advertisement

ಈ ವೇಳೆ ಅಕ್ಷರ ದಾಸೋಹ ನೌಕರರ ಸಮಿತಿ ತಾಲೂಕು ಅಧ್ಯಕ್ಷೆ ಸುನಂದಾ ಘಂಟಿ ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ. ಆಹಾರ ಧಾನ್ಯಗಳನ್ನು ಮಕ್ಕಳ ಮನೆಗೆ ತಲುಪಿಸಲಾಗಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ ಸರ್ಕಾರ ಸಹಾಯಹಸ್ತ ನೀಡಿದೆ. ಅದರಂತೆ ಬಿಸಿಯೂಟ ನೌಕರರಿಗೂ ಪರಿಹಾರ ನೀಡಬೇಕು. ಜೊತೆಗೆ ಏಪ್ರಿಲ್‌ ತಿಂಗಳಿನಿಂದ ಶಾಲೆ ಪ್ರಾರಂಭವಾಗುವವರೆಗೂ ಸಂಪೂರ್ಣ ವೇತನ ನೀಡಬೇಕು ಎಂದು ಆಗ್ರಹಿಸಿದರು.

ಗಂಗಮ್ಮ ಪೂಜಾರ, ರೋಷನಬೀ ಕುರಹಟ್ಟಿ, ಮಮತಾಜಬೇಗಂ ಹೊಸಮನಿ, ಪ್ರೇಮಾ ಜಾಧವ, ನೀಲಮ್ಮ ಬೀರನೂರ, ಸರೋಜಾ ಬೀತನೂರ, ಲಕ್ಷ್ಮೀ ಗಾಣಿಗೇರ, ಎಸ್‌.ಎ. ಹೊಂಬಳ, ಬಿ.ಎಚ್‌. ಬಾವಿ, ಎಸ್‌.ಎ. ತೊಂಡಿಹಾಳ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next