Advertisement

Ayodhya ರಾಮಮಂದಿರ ಅರ್ಚಕರ ವೇತನ ಹೆಚ್ಚಳ

12:38 AM Oct 13, 2023 | Team Udayavani |

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾ ಣಗೊಳ್ಳುತ್ತಿರುವ ರಾಮಮಂದಿರದ ಅರ್ಚಕರು ಹಾಗೂ ಸಿಬಂದಿಯ ವೇತನವನ್ನು ಶೇ.35ರಿಂದ ಶೇ.40ರ ವರೆಗೆ ಏರಿಕೆ ಮಾಡಲು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ನಿರ್ಧರಿಸಿದೆ.

Advertisement

“ರಾಮಮಂದಿರದ ಪ್ರಧಾನ ಅರ್ಚಕರು, ಅರ್ಚಕರು, ವ್ಯವಸ್ಥಾಪಕರು, ತೋಟಗಾರಿಕೆ ಸೇರಿದಂತೆ ಎಲ್ಲ ವಿಭಾಗದ ಸಿಬಂದಿಯ ವೇತನವನ್ನು ಟ್ರಸ್ಟ್‌ ಏರಿಕೆ ಮಾಡಿದೆ’ ಎಂದು ಟ್ರಸ್ಟ್‌ ಕಾರ್ಯದರ್ಶಿ ಚಂಪತ್‌ ರೈ ತಿಳಿಸಿದ್ದಾರೆ. ಟ್ರಸ್ಟ್‌ನ ಈ ನಿರ್ಧಾರವನ್ನು ಮಂದಿರದ ಪ್ರಧಾನ ಅರ್ಚಕ ಅಚಾರ್ಯ ಸತ್ಯೇಂದ್ರ ದಾಸ್‌ ಸ್ವಾಗತಿಸಿದ್ದಾರೆ. ಟ್ರಸ್ಟ್‌ ಮೂಲಗಳ ಪ್ರಕಾರ, ಪ್ರಧಾನ ಅರ್ಚಕರ ಮಾಸಿಕ ವೇತನವನ್ನು 25,000 ರೂ.ಗಳಿಂದ 32,900 ರೂ.ಗಳಿಗೆ ಏರಿಕೆ ಮಾಡಲಾಗಿದೆ. ಅದೇ ರೀತಿ ಅರ್ಚಕರ ವೇತನವನ್ನು 20,000 ರೂ.ಗಳಿಂದ 31,000 ರೂ.ಗಳಿಗೆ ಏರಿಕೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next