Advertisement

ಮತ್ತೆ 10 ಕೋಟಿ ಪಾವತಿಸಿ

05:17 AM May 08, 2019 | mahesh |

ಹೊಸದಿಲ್ಲಿ: ಏರ್‌ಸೆಲ್ ಮ್ಯಾಕ್ಸಿಸ್‌ ಹಗರಣದಲ್ಲಿ ಇ.ಡಿ. ಮತ್ತು ಸಿಬಿಐನಿಂದ ವಿಚಾರಣೆ ಎದುರಿಸುತ್ತಿರುವ ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂಗೆ ಅಮೆರಿಕ, ಜರ್ಮನ್‌ ಮತ್ತು ಸ್ಪೇನ್‌ ದೇಶಗಳಗೆ ಈ ತಿಂಗಳು ಪ್ರಯಾಣ ಮಾಡಲು ಸುಪ್ರೀಂ ಕೋರ್ಟ್‌ ಅನುಮತಿ ನೀಡಿದೆ. ಆದರೆ, ಅದಕ್ಕೂ ಮೊದಲು ಮತ್ತೆ 10 ಕೋಟಿ ರೂ. ಗಳ ಭದ್ರತಾ ಠೇವಣಿ ಇರಿಸುವಂತೆಯೂ ಆದೇಶಿಸಿದೆ. ಈ ಹಿಂದೆಯೂ 10 ಕೋಟಿ ರೂ. ಠೇವಣಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಇಡಲಾಗಿದೆಯಲ್ಲವೇ ಎಂದು ಕಾರ್ತಿ ಪರ ವಕೀಲರು ಕೇಳಿದಾಗ, ‘ಈಗ ಮತ್ತೆ 10 ಕೋಟಿ ರೂ. ಸಲ್ಲಿಸಲು ನಿಮಗೆ ತೊಂದರೆಯೇನೂ ಆಗಲಿಕ್ಕಿಲ್ಲ ಅಲ್ಲವೇ’ ಎಂದು ನ್ಯಾಯಪೀಠ ಮರುಪ್ರಶ್ನೆ ಹಾಕಿತು. ಕೊನೆಗೆ ಕಾರ್ತಿ ಪರ ವಕೀಲರು ಠೇವಣಿಯಿಡಲು ಒಪ್ಪಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next