Advertisement

ಕಿಚ್ಚ ಸುದೀಪ್‌, ಉಪೇಂದ್ರ ಬಳಿ ಕ್ಷಮೆ ಕೇಳಿದ ಟಾಲಿವುಡ್‌ ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌

03:24 PM Mar 02, 2023 | Team Udayavani |

ಹೈದರಾಬಾದ್: ಟಾಲಿವುಡ್‌ ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌ ಸದ್ಯ ರಾಜಕೀಯ ಚಟುವಟಿಕೆಯಲ್ಲಿ ಬ್ಯುಸಿಯಾಗಿದ್ದಾರೆ. ಮುಂಬರುವ ಸಿನಿಮಾಗಳ ಶೂಟಿಂಗ್ ಶೆಡ್ಯೂಲ್‌ ನ್ನು ಬೇಗ ಬೇಗನೇ ಮುಗಿಸಿ ಪಕ್ಷದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ.

Advertisement

ಈ ನಡುವೆ ಸ್ಯಾಂಡಲ್‌ ವುಡ್‌ ಸ್ಟಾರ್‌ ನಟರಾದ ಉಪೇಂದ್ರ, ಕಿಚ್ಚ ಸುದೀಪ್‌ ಅವರ ಬಳಿ ಪವನ್‌ ಕಲ್ಯಾಣ್‌ ಕ್ಷಮೆ ಕೇಳಿದ್ದಾರೆ. ಇತ್ತೀಚೆಗಷ್ಟೇ ಪ್ಯಾನ್‌ ಇಂಡಿಯಾ ʼಕಬ್ಜʼ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮ ನೆರವೇರಿತ್ತು. ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಪವನ್‌ ಕಲ್ಯಾಣ್‌ ಅವರಗೆ ಚಿತ್ರ ತಂಡ ಆಹ್ವಾನ ನೀಡಿತ್ತು.

ಆದರೆ ತನ್ನ ʼಜನಸೇನಾʼ ಪಕ್ಷದ ಕಾರ್ಯಕ್ರಮಗಳು ಮೊದಲೇ  ನಿಗದಿಯಾಗಿದ್ದರಿಂದ ಆ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಕಾರಣದಿಂದ ಪವನ್‌ ಕಲ್ಯಾಣ್‌ ʼಕಬ್ಜʼ ಆಡಿಯೋ ಲಾಂಚ್‌ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಇದರಿಂದ ನಟ ಪವನ್‌ ಕಲ್ಯಾಣ್‌  ಕಿಚ್ಚ ಹಾಗೂ ಉಪ್ಪಿ ಬಳಿ ಕ್ಷಮೆ ಕೇಳಿ, ಕಾರ್ಯಕ್ರಮಕ್ಕೆ ಆಹ್ವಾನ ನೀಡಿದಕ್ಕೆ ಧನ್ಯವಾದಗಳು, ಪಕ್ಷದ ಕಾರ್ಯಕ್ರಮದಲ್ಲಿ ಭಾಗಿಯಾದ ಕಾರಣಕ್ಕೆ ನಾನು ನಿಮ್ಮ ಸಿನಿಮಾದ ಆಡಿಯೋ ಲಾಂಚ್‌ ನಲ್ಲಿ ಭಾಗಿಯಾಗಿಲ್ಲ. ನಿಮ್ಮ ಸಿನಿಮಾ ಸೂಪರ್‌ ಹಿಟ್‌ ಆಗಲಿ ಎಂದು ಹಾರೈಸಿದ್ದಾರೆ.

ಅಂದ ಹಾಗೆ ಆರ್.‌ ಚಂದ್ರು ಅವರ ಬಿಗ್‌ ಬಜೆಟ್‌ ʼಕಬ್ಜʼ ಇದೇ ಮಾರ್ಚ್‌ 17 ರಂದು ರಿಲೀಸ್‌ ಆಗಲಿದೆ. ಸಿನಿಮಾದಲ್ಲಿ ಕಿಚ್ಚ ಸುದೀಪ್‌ ʼಭಾರ್ಗವ್‌ ಭಕ್ಷಿʼ ಪಾತ್ರ ಮಾಡುತ್ತಿದ್ದು, ಉಪ್ಪಿ, ಶ್ರೇಯಾ ಶರಣ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸದ್ಯ ಪವನ್‌ ಕಲ್ಯಾಣ್‌ ಕ್ರಿಶ್ ಅವರ ʼಹರಿ ಹರ ವೀರ ಮಾಲುʼ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ನಿಧಿ ಅಗರ್‌ ವಾಲ್‌ ನಾಯಕಿಯಾಗಿ ಇದರಲ್ಲಿ ಕಾಣಿಸಿಕೊಳ್ಳಲಿದ್ದು, ಬಾಲಿವುಡ್‌ ನಟ ಬಾಬಿ ಡಿಯೋಲ್ ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next