Advertisement

Pavanje ಹೆದ್ದಾರಿಯಲ್ಲಿ ಲಾರಿ-ಬಸ್ ಅಪಘಾತ

04:10 PM Jun 11, 2023 | Team Udayavani |

ಹಳೆಯಂಗಡಿ: ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಸಮೀಪದ ಪಾವಂಜೆ ಮುಖ್ಯ ಜಂಕ್ಷನ್ ಬಳಿ ಕಾಂಕ್ರೀಟ್ ಮಿಕ್ಸರ್ ಲಾರಿ ಹಾಗೂ ಖಾಸಗಿ ಬಸ್ಸಿನ ನಡುವೆ ನಡೆದ ಅಪಘಾತದಲ್ಲಿ ಬಸ್‌ನ ಚಾಲಕ ಮತ್ತು ನಿರ್ವಾಹಕ ತೀವ್ರ ಗಾಯಗೊಂಡ ಘಟನೆ ಜೂ.11ರ ಭಾನುವಾರ ನಡೆದಿದೆ.

Advertisement

ಅಪಘಾತದಲ್ಲಿ ಗಾಯಗೊಂಡ ಗಾಯಾಳು, ಬಸ್‌ ಚಾಲಕ  ಮಂಜುನಾಥ ಹಾಗೂ ಅದರ ನಿರ್ವಾಹಕ ಮನು ಎಂದು ಗುರುತಿಸಲಾಗಿದೆ.

ಬಳ್ಳಾರಿಯಿಂದ ಮಂಗಳೂರಿನತ್ತ ಸಂಚರಿಸುತ್ತಿದ್ದ ಬಸ್ ಪಾವಂಜೆ ಜಂಕ್ಷನ್‌ನ ಬಳಿ ತಲುಪುತಿದ್ದಂತೆ ಪಕ್ಕದ ಗದ್ದೆಯಿಂದ ಬಂದ ಕಾಂಕ್ರೀಟ್ ಮಿಕ್ಸರ್ ಲಾರಿ ಢಿಕ್ಕಿ ಹೊಡೆದಿದ್ದು, ಹೊಡೆದ ರಭಸಕ್ಕೆ ಲಾರಿ ಮಗುಚಿ ಬಿದ್ದಿದೆ.

ಅಪಘಾತದ ಸಮಯ ತೀವ್ರವಾಗಿ ಮಳೆ ಬರುತ್ತಿದ್ದ ಕಾರಣ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಕ್ರೇನ್ ಮೂಲಕ ಎರಡೂ ವಾಹನಗಳನ್ನು ತೆರವು ಮಾಡಲಾಗಿದೆ.

ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ದೃಶ್ಯ ಸ್ಥಳೀಯ ಸಿಸಿ ಟೀವಿಯಲ್ಲಿ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next