Advertisement

ಲಾಲುಗೆ ಇನ್ನಷ್ಟು ಸಂಕಷ್ಟ; ಮಗನ ಮರಳು ಡೀಲ್‌ ವಿರುದ್ಧ ತನಿಖೆ 

10:00 AM Aug 01, 2017 | |

ಪಟ್ನಾ: ಮಹಾಘಟಬಂಧನ್‌ ಮುರಿದುಕೊಂಡು ಬಿಜೆಪಿ ಜೊತೆ ಸೇರಿ ನಿತೀಶ್‌ ಕುಮಾರ್‌ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಯಾದವ್‌ ಗೆ ಇನ್ನಷ್ಟು ಸಂಕಷ್ಟ ಎದುರಾಗಿದೆ. ಮಹಾಘಟಬಂಧನ್‌ ಸರ್ಕಾರವಿದ್ದ ವೇಳೆ ಪಟ್ನಾ ಮೃಗಾಯಲಯದ ಮರಳು ಖರೀದಿಯಲ್ಲಿ ಅವ್ಯವಹಾರ ಮಾಡಿರುವ ಕುರಿತು ಲಾಲು ಹಿರಿಯ ಪುತ್ರ ತೇಜ್‌ ಪಾಲ್‌ ಯಾದವ್‌ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.

Advertisement

ಉಪ ಮುಖ್ಯಮಂತ್ರಿ  ಸುಶೀಲ್‌ ಕುಮಾರ್‌ ಮೋದಿ ಅವರು ವಿರೋಧ ಪಕ್ಷದ ನಾಯಕರಾಗಿದ್ದ ವೇಳೆ ಮರಳು ಖರೀದಿ ಅಕ್ರಮ ನಡೆಸಿರುವ ಕುರಿತಾಗಿ ಪರಿಸರ ಮತ್ತು ಅರಣ್ಯ ಸಚಿವರಾಗಿದ್ದ ಲಾಲು ಪುತ್ರ ತೇಜ್‌ ಪ್ರತಾಪ್‌ ಮೇಲೆ ಆರೋಪ ಮಾಡಿದ್ದರು. ಸಾಗುನಾ ಮೋರ್‌ನಲ್ಲಿ ಸಿಟಿ ಮಾಲ್‌ ನಿರ್ಮಾಣಕ್ಕೆ ಮೃಗಾಲಯಕ್ಕೆ 90 ಲಕ್ಷ ರೂಪಾಯಿ ನೀಡಿ ಖರೀದಿಸಿದ್ದ ಮರಳನ್ನು ಯಾವುದೇ ಟೆಂಡರ್‌ ಕರೆಯದೆ  ಬಳಸಿಕೊಳ್ಳಲಾಗಿದೆ ಎಂದು ಆರೋಪ ಮಾಡಿದ್ದರು. ಮಾತ್ರವಲ್ಲದೆ ಮಾಲ್‌ ನಿರ್ಮಾಣ ಮಾಡಲಾಗುತ್ತಿರುವ ಡಿಲೈಟ್‌ ಮಾರ್ಕೆಟಿಂಗ್‌ ಕಂಪೆನಿಯಲ್ಲಿ  ಲಾಲು ಪುತ್ರರಿಬ್ಬರು ಆಡಳಿತ ಮಂಡಳಿಯ ನಿರ್ದೇಶಕರಾಗಿದ್ದರು ಎಂದು ಆರೋಪಿಸಿದ್ದರು. 

ಈ ಹಿಂದೆ ಮರಳು ಖರೀದಿ ಕುರಿತಾಗಿನ ತನಿಖೆಯಲ್ಲಿ ಹಗರಣ ನಡೆದಿರುವ ಕುರಿತು ಕಂಡು ಬಂದಿರಲಿಲ್ಲಎಂದು   ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ  ಅಂಜನಿ ಕುಮಾರ್‌ ಸಿಂಗ್‌ ಹೇಳಿದ್ದರು. ಇದೀಗ ಹೊಸ ಕಡತಗಳನ್ನುತನಿಖೆಗೆ ಅರಣ್ಯ ಅಧಿಕಾರಿಗಳಿಗೆ ನೀಡಿರುವ ಬಗ್ಗೆ ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next