Advertisement

ಪೂಜಾ ಪೆಂಡಾಲಲ್ಲಿ ತೇಜಸ್ವಿ ರಾಜ್ಯಾಭೀಷೇಕ ನಡೆಸಿದ ಶತ್ರುಘ್ನ ಸಿನ್ಹಾ

03:44 PM Oct 17, 2018 | udayavani editorial |

ಪಟ್ನಾ : ಅತೃಪ್ತ ಬಿಜೆಪಿ ನಾಯಕ, ಮಾಜಿ ಬಾಲಿವುಡ್‌ ನಟ, ಸಂಸದ ಶತ್ರುಘ್ನ ಸಿನ್ಹಾ ಅವರಿಂದು ಪಟ್ನಾದಲ್ಲಿನ ದುರ್ಗಾ ಪೂಜಾ ಪೆಂಡಾಲಿಗೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಜತೆಗೂಡಿ ಭೇಟಿ ನೀಡಿ ತೇಜಸ್ವಿಯ ಹಣೆಯಲ್ಲಿ ತಿಲಕ ಇಡುವ ಮೂಲಕ ಆತನ ‘ರಾಜ್ಯಾಭಿಷೇಕ’ ವನ್ನು ನೆರವೇರಿಸಿದರು. 

Advertisement

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರಕಾರದ ವಿರುದ್ಧ ಸದಾ ಟೀಕಾ ಪ್ರಹಾರ ನಡೆಸುತ್ತಿರುವ ಶತ್ರುಘ್ನ ಸಿನ್ಹಾ ಅವರು ಆರ್‌ಜೆಡಿ ಉತ್ತರಾಧಿಕಾರಿ ತೇಜಸ್ವಿ ಜತೆಗೆ ಡಾಕ್‌ ಬಂಗ್ಲೆ ರಸ್ತೆಯಲ್ಲಿನ ಪೂಜಾ ಪೆಂಡಾಲ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಅಚ್ಚರಿಗೆ ಕಾರಣರಾದರು. 

ಪೆಂಡಾಲ್‌ನಿಂದ ಮರಳುವಾಗ ಶತ್ರುಘ್ನ ಸಿನ್ಹಾ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ತೇಜಸ್ವಿ ಸಣ್ಣ ಪ್ರಾಯದವನಿದ್ದು ಆತನಲ್ಲಿ ನಾಯಕತ್ವ ಗುಣಗಳಿವೆ. ಆತನಿಗೆ ನನ್ನ ಶುಭ ಹಾರೈಕೆಗಳು. ಇವತ್ತು ಆತನ ರಾಜ್ಯಾಭಿಷೇಕವನ್ನು ನಾನು ನಡೆಸಿದ್ದೇನೆ; ಬಿಹಾರವನ್ನು ಆತ ಸಮರ್ಥವಾಗಿ ಮುನ್ನಡೆಸುವನೆಂಬ ವಿಶ್ವಾಸ ನನಗಿದೆ’ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಶತ್ರುಘ್ನ ಸಿನ್ಹಾ ಅವರು ಹಳೇ ಹಿಂದಿ ಸಿನೆಮಾದ “ಅಬ್‌ ತುಮ್ಹಾರೆ ಹವಾಲೆ ಎ ವತನ್‌ ಸಾಥಿಯೋಂ’ ಎಂಬ ಹಾಡನ್ನು ಗುನುಗಿದರು. 

29ರ ಹರೆಯದ ತೇಜಸ್ವಿ ಅವರು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಅವರ ಪುತ್ರನಾಗಿದ್ದು ಬಿಹಾರ ವಿಧಾನಸಭೆಯಲ್ಲಿ ವಿಪಕ್ಷ ನಾಯಕನಾಗಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next