Advertisement

ಮಾಜಿ ಸಿಎಂ ಯಡಿಯೂರಪ್ಪನವರಿಗೆ ಸಕ್ಕರೆ ಹಾರ ಹಾಕಿ ಸಂಭ್ರಮಿಸಿದ ಪಾಟೀಲ್

01:28 PM Mar 07, 2023 | Team Udayavani |

ಕಲಬುರಗಿ: ಹೋಳಿ ಹಬ್ಬದ ಸಂದರ್ಭದಲ್ಲಿಯೇ ನಗರಕ್ಕೆ ಆಗಮಿಸಿದ್ದ ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಸಕ್ಕರೆ ಹಾರ ಹಾಕುವ ಮೂಲಕ ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್ ಸನ್ಮಾನಿಸಿದರು.

Advertisement

ಇದೆ ವೇಳೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕೇಂದ್ರ ಸಚಿವ ಭಗವಂತ ಕುಟುಂಬ ಅವರಿಗೂ ಕೂಡ ಸಕ್ಕರೆ ಹಾರಗಳನ್ನು ಹಾಕಿ ಸಂಪ್ರದಾಯಿಕ ಹೋಳಿ ಹಬ್ಬದ ಶುಭ ಕೋರಿದರು.

ಇದರಿಂದಾಗಿ ಐವನ್ ಚಾಹಿ ಅತಿಥಿಗೃಹದಲ್ಲಿ ಕ್ಷಣಕಾಲ ಹಬ್ಬದ ವಾತಾವರಣ ಮೂಡಿತು ಶಾಸಕರಾದ ದತ್ತಾತ್ರೆಯ ಪಾಟೀಲ್ ರೇವೂರ್, ಸುಭಾಷ್ ಗುತ್ತೇದಾರ್ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಸೇರಿದಂತೆ ಬಿಜೆಪಿಯ ಎಲ್ಲ ಮುಖಂಡರು ಖುಷಿಪಟ್ಟು ನಗುವಿನಲ್ಲಿ ತೇಲಿದರು.

ಇದನ್ನೂ ಓದಿ:ಅಮೆರಿಕಾದಲ್ಲಿ ವಿಮಾನ ಪತನ: ಭಾರತೀಯ ಮೂಲದ ಮಹಿಳೆ ಮೃತ್ಯು, ಮಗಳು ಗಂಭೀರ

ಹೋಳಿ ಹಬ್ಬದ ಸಂಭ್ರಮದಂತೆ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಹಬ್ಬದ ದಿನ ಚಿಕ್ಕ ಮಕ್ಕಳಿಗೆ ಹಾಗೂ ಪ್ರೀತಿ ಪಾತ್ರರಿಗೆ ಸಕ್ಕರೆ ಹಾರಗಳನ್ನು ಹಾಕಿ ಖುಷಿ ಪಟ್ಟು ಸಂಭ್ರಮಿಸುವುದು ಸಂಪ್ರದಾಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next