Advertisement

ಬುರಾರಿ ಮನೆಗೆ ಬಾಡಿಗೆಗೆ ಬಂದ ಪೆಥಾಲಜಿಸ್ಟ್‌

12:28 AM Dec 29, 2019 | Team Udayavani |

ಹೊಸದಿಲ್ಲಿ: 2018ರ ಜುಲೈನಲ್ಲಿ ದಿಲ್ಲಿಯ ಬುರಾರಿ ಪ್ರಾಂತ್ಯದಲ್ಲಿ ಒಂದೇ ಕುಟುಂಬದ 11 ಸದಸ್ಯರು ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ ಮನೆಗೆ, ರೋಗಶಾಸ್ತ್ರಜ್ಞರಾದ ಮೋಹನ್‌ ಸಿಂಗ್‌ ಕಶ್ಯಪ್‌ ಎಂಬವರು ಬಾಡಿಗೆದಾರರರಾಗಿ ಕಾಲಿಡುತ್ತಿದ್ದಾರೆ. ರವಿವಾರ ಆ ಮನೆಯಲ್ಲಿ ಹೋಮ- ಹವನಗಳನ್ನು ಮಾಡಿ ಗೃಹ ಪ್ರವೇಶ ಮಾಡುವುದಾಗಿ ಅವರು ತಿಳಿಸಿದ್ದಾರೆ. 2018ರಲ್ಲಿ ಈ ಮನೆಯ 11 ಸದಸ್ಯರು ಮೋಕ್ಷಕ್ಕಾಗಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದು ದೇಶಾ ದ್ಯಂತ ಸುದ್ದಿಯಾಗಿತ್ತು.

Advertisement

ಆ ಪ್ರಕರಣ ಬೆಳಕಿಗೆ ಬಂದ ಅನಂತರ ಮನೆ ಯನ್ನು ಚಂದಾವತ್‌ ಕುಟುಂಬದ ಹತ್ತಿರದ ಸಂಬಂಧಿ ದಿನೇಶ್‌ ಚಂದಾವತ್‌ ಎಂಬವರು ಸುಪರ್ದಿಗೆ ಪಡೆದಿದ್ದರು. ಆದರೆ, ಆಗಿನಿಂದ ಈ ಮನೆಗೆ ಯಾರೂ ಬಾಡಿಗೆಗೆ ಬಂದಿರಲಿಲ್ಲ. ಈಗ ದಿನೇಶ್‌ ಅವರಿಂದಲೇ ಆ ಮನೆಯ ನೆಲ ಅಂತಸ್ತು ಹಾಗೂ ಮೊದಲ ಮಹಡಿಯನ್ನು ಕಶ್ಯಪ್‌ ಬಾಡಿಗೆ ಪಡೆದಿದ್ದಾರೆ. ನೆಲ ಅಂತಸ್ತಿನಲ್ಲಿ ಪೆಥಾಲಜಿ ಲ್ಯಾಬ್‌ ಮಾಡಿ, ಮೊದಲ ಅಂತಸ್ತಿನಲ್ಲಿ ತಮ್ಮ ಕುಟುಂಬದೊಂದಿಗೆ ವಾಸವಾಗಿರಲು ನಿರ್ಧರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next