Advertisement

ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ ಅವರಿಗೆ ಪಿತೃ ವಿಯೋಗ

12:54 PM Nov 04, 2021 | Team Udayavani |

ಬಂಟ್ವಾಳ: ಬಂಟ್ವಾಳ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ,‌ ಬಿ.ಸಿ.ರೋಡು ಪಲ್ಲಮಜಲು ನಿವಾಸಿ ಜಿ.ಸದಾನಂದ ಮಲ್ಲಿ‌ ಅವರು ನ. ೩ರಂದು ರಾತ್ರಿ ನಿಧನ ಹೊಂದಿದರು. ಮೃತರು ಪುತ್ರ ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ ಸೇರಿದಂತೆ ಹಲವು ಬಂಧುಗಳನ್ನು ಅಗಲಿದ್ದಾರೆ.

Advertisement

ಇದನ್ನೂ ಓದಿ;- ರಜನಿಯ ‘ಅಣ್ಣಾಟ್ಟೆ’ ಚಿತ್ರ ರಿಲೀಸ್ : 1 ರೂ.ಗೆ ದೋಸೆ ಮಾರಿದ ಅಭಿಮಾನಿ
ಸಾಮಾಜಿಕ, ರಾಜಕೀಯ, ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರೀಯರಾಗಿದ್ದ ಮಲ್ಲಿ ಅವರು ಪುದು ಕ್ಷೇತ್ರದಿಂದ ಜಿ.ಪಂ.ಸದಸ್ಯರು ಕೂಡ ಆಗಿದ್ದರು. ಬಿ.ಸಿ.ರೋಡಿನ ಶ್ರೀ ಚಂಡಿಕಾ ಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು.

ಹಿರಿಯ ಕಾಂಗ್ರೆಸ್ ನಾಯಕರಾಗಿದ್ದ ಅವರು ಬಳಿಕ ಬಿಜೆಪಿ ಸೇರಿ ಗೋಳ್ತಮಜಲು ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಇವರ ಪತ್ನಿ ಸ್ವರ್ಣಲತಾ ಮಲ್ಲಿಯರು ಕೂಡ ಪುರಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next