Advertisement

ಪತಂಜಲಿv/s ಹಿಂದುಸ್ಥಾನ್‌ ಯೂನಿಲಿವರ್‌:ಸಾಬೂನು ಜಾಹೀರಾತಿಗೆ ತಡೆ

11:54 AM Sep 08, 2017 | |

ಮುಂಬಯಿ:  ಬಾಬಾ ರಾಮದೇವ್‌ ಅವರ ಪತಂಜಲಿ ಆಯುರ್ವೇದ್‌ ಕಂಪೆನಿಯ  ಸಾಬೂನಿನ ಟಿವಿ ಜಾಹೀರಾತಿನ ಮೇಲೆ ಬಾಂಬೇ ಹೈಕೋರ್ಟ್‌ ತಡೆಯಾಜ್ಞೆ  ಹೇರಿದೆ. 

Advertisement

ಹಿಂದುಸ್ಥಾನ್‌ ಯೂನಿಲಿವರ್‌ ಸಂಸ್ಥೆಯು ಈ ಜಾಹೀರಾತಿನ ಮೇಲೆ ತಡೆಯಾಜ್ಞೆ  ಹೇರುವಂತೆ ಕೋರಿ ಬಾಂಬೇ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.  ಪತಂಜಲಿ  ಸಾಬೂನಿನ ಜಾಹೀರಾತಿನಲ್ಲಿ ಇತರ ಸಾಬೂನು ಉತ್ಪನ್ನಗಳನ್ನು ನೇರವಾಗಿ ಗುರಿ ಮಾಡಿಕೊಳ್ಳಲಾಗಿದೆ ಎಂದು  ಸಂಸ್ಥೆಯು ಅರ್ಜಿಯಲ್ಲಿ ಆರೋಪಿಸಿದೆ.

 ಬುಧವಾರ  ಈ ಅರ್ಜಿಯ ಮೇಲೆ ವಿಚಾರಣೆ ನಡೆಸಿರುವ ಹೈಕೋರ್ಟ್‌ ಮುಂದಿನ ವಿಚಾರಣೆ ವರೆಗೆ ಜಾಹೀರಾತಿಗೆ ತಡೆ ಹೇರುವಂತೆ ಪತಂಜಲಿ ಆಯುರ್ವೇದಕ್ಕೆ ಆದೇಶಿಸಿದೆ. ಸೆ. 18ರಂದು ಅರ್ಜಿಯ ಮುಂದಿನ ವಿಚಾರಣೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next