Advertisement

ದರ್ಶನ್‌ ಅಭಿಮಾನಿಗಳ ಪಾಸ್‌ ಬೇಸರ!

10:05 AM Jul 04, 2019 | Lakshmi GovindaRaj |

ದರ್ಶನ್‌ ಮುಖ್ಯಭೂಮಿಕೆಯಲ್ಲಿರುವ ಮುನಿರತ್ನ ನಿರ್ಮಾಣದ “ಕುರುಕ್ಷೇತ್ರ’ ಚಿತ್ರದ ಆಡಿಯೋ ಬಿಡುಗಡೆಗೆ ದಿನಾಂಕ ನಿಗದಿಯಾಗಿರುವುದು ನಿಮಗೆ ಗೊತ್ತೇ ಇದೆ. ಜುಲೈ 7 ರಂದು ಅದ್ಧೂರಿಯಾಗಿ ಚಿತ್ರದ ಆಡಿಯೋ ಬಿಡುಗಡೆಯಾಗಲಿದೆ. ಆಡಿಯೋ ಬಿಡುಗಡೆ ದೊಡ್ಡ ಮಟ್ಟದಲ್ಲಿ ನಡೆಯುವುದರಿಂದ ಮತ್ತು ನಿರೀಕ್ಷೆ ಹೆಚ್ಚಿರುವುದರಿಂದ ಪಾಸ್‌ ಇದ್ದವರಿಗಷ್ಟೇ ಪ್ರವೇಶ ಎಂಬ ನಿಯಮವನ್ನು ಚಿತ್ರತಂಡ ಮಾಡಿದೆ.

Advertisement

ಹಾಗಾಗಿ, ಆಡಿಯೋ ಬಿಡುಗಡೆ ಕುರಿತಾದ ಪಾಸ್‌ ಅನ್ನು ಚಿತ್ರತಂಡ ಮುದ್ರಿಸಿದೆ. ಇದು ಈಗ ದರ್ಶನ್‌ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಅದಕ್ಕೆ ಕಾರಣ ಪಾಸ್‌ನಲ್ಲಿ ದರ್ಶನ್‌ ಫೋಟೋ ಇಲ್ಲದಿರುವುದು. ಸಾಮಾನ್ಯವಾಗಿ ಸಿನಿಮಾ ಕಾರ್ಯಕ್ರಮದ ಕುರಿತು ಪಾಸ್‌ ಹೊರತಂದರೆ ಅದರಲ್ಲಿ ಆಯಾ ಚಿತ್ರದ ನಾಯಕನ ಫೋಟೋ ಹಾಕಲಾಗುತ್ತದೆ.

ಆದರೆ, “ಕುರುಕ್ಷೇತ್ರ’ ಚಿತ್ರದ ಪಾಸ್‌ನಲ್ಲಿ ದರ್ಶನ್‌ ಫೋಟೋ ಹಾಕಿಲ್ಲ. ಹಾಗಂತ ಆ ಜಾಗಕ್ಕೆ ಬೇರೆ ಯಾರ ಫೋಟೋ ಹಾಕಿದ್ದಾರೆಂಬ ಕುತೂಹಲ ನಿಮ್ಮಲ್ಲಿರಬಹುದು. ಹಾಗಂತ ಯಾರೊಬ್ಬ ಕಲಾವಿದರ ಫೋಟೋ ಹಾಕಿಲ್ಲ. ಆದರೆ, ಅಭಿಮಾನಿಗಳಿಗೆ ದರ್ಶನ್‌ ಫೋಟೋ ಇರಬೇಕೆಂಬ ಆಸೆ. ಹಾಗಾಗಿ, ಅಭಿಮಾನಿಗಳು ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಬೇಸರ ತೋಡಿಕೊಂಡಿದ್ದಾರೆ.

ಅಭಿಮಾನಿಗಳ ಬೇಸರ ದರ್ಶನ್‌ ಗಮನಕ್ಕೂ ಬಂದಿದ್ದು, ದರ್ಶನ್‌ ಅಭಿಮಾನಿಗಳಿಗೆ ಬೇಸರ ಮಾಡಿಕೊಳ್ಳದಂತೆ ಟ್ವೀಟರ್‌ನಲ್ಲಿ ಮನವಿ ಮಾಡಿದ್ದಾರೆ. “ಕುರುಕ್ಷೇತ್ರ’ ಎನ್ನುವುದು ಬಹುತಾರಾಗಣದ ಚಿತ್ರ. ಎಲ್ಲರನ್ನು ಸಮಾನಕಾರವಾಗಿ ಕಾಣಬೇಕೆಂಬ ಸದುದ್ದೇಶದಿಂದ ಯಾವ ತಾರೆಯ ಫೋಟೋಗಳನ್ನು ಪಾಸ್‌ಗಳ ಮೇಲೆ ಪ್ರಿಂಟ್‌ ಮಾಡಿಲ್ಲ.

Advertisement

ಇಂತಹ ಚಿಕ್ಕ ವಿಷಯಗಳಿಗೆಲ್ಲ ಬೇಸರವನ್ನು ವ್ಯಕ್ತಪಡಿಸುವ ಅವಶ್ಯಕತೆ ಇಲ್ಲ. ಚಿತ್ರದಲ್ಲಿ ಎಲ್ಲರಿಗೂ ತಕ್ಕ ನ್ಯಾಯವನ್ನು ಒದಗಿಸಲಾಗಿದೆ. ಆರಾಮಾಗಿ ಆಡಿಯೋ ಬಿಡುಗಡೆಯಲ್ಲಿ ಪಾಲ್ಗೊಳ್ಳಿ’ ಎಂದು ದರ್ಶನ್‌ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next