Advertisement

ಹಸೆಮಣೆ ಏರಬೇಕಿದ್ದ ಯುವತಿ ಕೋವಿಡ್‌ಗೆ ಬಲಿ

01:16 PM May 12, 2021 | Suhan S |

ಮುದ್ದೇಬಿಹಾಳ: ಮೇ 23ರಂದು ಹಸೆಮಣೆ ಏರಿ ವೈವಾಹಿಕ ಜೀವನಕ್ಕೆ ಪದಾರ್ಪಣೆ ಮಾಡಬೇಕಿದ್ದ ಪಟ್ಟಣದ ಯುವತಿ ಶೃತಿ ಐಹೊಳ್ಳಿ (24) ಮಂಗಳವಾರ ಕೋವಿಡ್‌ ಮಹಾಮಾರಿಗೆ ಬಲಿಯಾದರು.

Advertisement

ಇಲ್ಲಿನ ವಿಬಿಸಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿರುವ ಸುಭಾಷಚಂದ್ರಐಹೊಳ್ಳಿಯವರ ಮೊದಲಪುತ್ರಿಯಾಗಿದ್ದ ಇವರು ಬಿಎಸ್ಸಿ, ಬಿಇಡಿ ಪದವೀಧರೆಯಾಗಿ ಗಣಿತ ವಿಷಯದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದರು. ಇಲ್ಲಿನ ಕೆಬಿಎಂಪಿ ಶಾಲೆಯಲ್ಲಿ 2018ರಿಂದ 2020ರವರೆಗೆಎರಡು ವರ್ಷಗಳ ಕಾಲ ಅತಿಥಿ ಶಿಕ್ಷಕಿಯಾಗಿದ್ದರು.

ಪಟ್ಟಣದಲ್ಲಿ ಹೆಚ್ಚುತ್ತಿರುವ ಕೋವಿಡ್ ಎರಡನೇಅಲೆಯಿಂದ ರಕ್ಷಿಸಿಕೊಳ್ಳಲು ಸ್ವಗ್ರಾಮಕ್ಕೆ ಹೋಗಿ ವಾಸವಾಗಿದ್ದರು. ಏಕಾಏಕಿ ಕೋವಿಡ್‌ ಕಾಣಿಸಿಕೊಂಡುಚಿಕಿತ್ಸೆ ಫಲಿಸದೆ ಮೃತಪಟ್ಟರು ಎಂದು ಮೂಲಗಳು ತಿಳಿಸಿವೆ.

ಮದುವೆಗೆ ಎಲ್ಲ ತಯಾರಿ ಮಾಡಿಕೊಂಡು ಬಟ್ಟೆ, ಬಂಗಾರ, ಭಾಂಡೆ ಎಲ್ಲವನ್ನೂ ಖರೀದಿಸಿ ಮಗಳ ಮದುವೆಯ ಸಂಭ್ರಮದಲ್ಲಿದ್ದ ಕುಟುಂಬದಲ್ಲೀಗಸೂತಕದ ಛಾಯೆ ಮೂಡಿ ಎಲ್ಲರನ್ನೂ ಕಂಗೆಡಿಸಿದೆ. ಮೃತರಿಗೆ ತಂದೆ, ತಾಯಿ, ಸಹೋದರ, ಸಹೋದರಿ, ಅಪಾರ ಬಂಧುಬಳಗ ಇದೆ.

Advertisement

Udayavani is now on Telegram. Click here to join our channel and stay updated with the latest news.

Next